ರಾಮಕೃಷ್ಣ ತಪೋವನದಲ್ಲಿ ಶ್ರೀ ರಾಮ ಪಟ್ಟಾಭಿಷೇಕ
ಕೈಕಂಬ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಅಯೋಧ್ಯಾ ಪತಿ ಶ್ರೀರಾಮ ಚಂದ್ರರ ಪಟ್ಟಾಭಿಷೇಕವು ದ.17ರಂದು ಭಾನುವಾರ ನಡೆಯಲಿರುವುದು.

ದ.೧೭ರಂದು ಭಾನುವಾರ ಅಪರಾಹ್ನ ೩:೦೦ಗಂಟೆಗೆ ಭವ್ಯ ಶೋಭಾಯಾತ್ರೆಯು ಪೊಳಲಿ ದೇವಸ್ಥಾನದಿಂದ ಹೊರಟು ತಪೋವನದಲ್ಲಿ ಸಂಪನ್ನಗೊಳ್ಳಲಿದೆ.
ಬಳಿಕ ದೇವರಿಗೆ ಪಂಚಮೃತ ಅಭಿಷೇಕ, ಶೋಡಶೋಪಚಾರ ಪೂಜೆ, ರಜತ ಕಿರೀಟ ಧಾರಣೆ ನಡೆಯಲಿದೆ. ಶ್ರೀರಾಮ ಪಟ್ಟಾಭಿಷೇಕದ ನಂತರ ಮಹಾ ಮಂಗಳಾರತಿ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥನೆ ನೆರವೇರಲಿದೆ.
ಈ ಸಂದರ್ಭದಲ್ಲಿ ಪೂಜನೀಯ ವಿವೇಕ ಚೈತನ್ಯಾನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೂರು ಸ್ವಾಮಿ ಪ್ರವಚನ ನೀಡಲಿರುವರು.
ವಿಶೇಷ ಸೂಚನೆ: ರಾಮಕೃಷ್ಣ ತಪೋವನದಲ್ಲಿ ಜ.೨೨ರ ವರೆಗೆ ಪ್ರತಿ ದಿನ ಸಂಜೆ ೫:೦೦ರಿಂದ ೬:೦೦ರ ವರೆಗೆ ಹಾಗೂ ೭:೦೦ರಿಂದ ೮:೦೦ರ ವರೆಗೆ ಸಾಮೂಹಿಕ ರಾಮನಾಮ ಜಪ ನಡೆಯುತ್ತಿದ್ದು, ಭಗವದ್ಭಕ್ತರು ಈ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ಸ್ವಾಮೀಜಿ ವಿನಂತಿಸಿದ್ದಾರೆ.