Published On: Sat, Oct 7th, 2023

ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಮುಂಬೈ ಲಿಮಿಟೆಡ್‌ ಇದರ ನಿರ್ದೇಶಕರಾಗಿ ಬೆಳ್ಳೂರು ಕೆ. ಗಂಗಾಧರ್‌ ಪೂಜಾರಿ ಆಯ್ಕೆ

ಕೈಕಂಬ: ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಮುಂಬೈ ಲಿಮಿಟೆಡ್‌ ಇದರ ನಿರ್ದೇಶಕರಾಗಿ ಬೆಳ್ಳೂರು ಮೂಲದ ಮುಂಬೈ ಉದ್ಯಮಿ ಗಂಗಾಧರ ಪೂಜಾರಿ ಆಯ್ಕೆಯಾಗಿದ್ದಾರೆ.

ಗಂಗಾಧರ ಪೂಜಾರಿಯವರು ಬೆಳ್ಳೂರು ಪಂಚಗ್ರಾಮದ ಬಿಲ್ಲವರ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷರಾಗಿ,ಮುಂಬೈ ಕಾಂದಿವಲಿ ಯ ಬಿಲ್ಲವ ಅಸೋಸಿಯೇಷನ್ ಮಾಜಿ ಅಧ್ಯಕ್ಷರಾಗಿ,ಬೆಳ್ಳೂರು ಕಾವೇಶ್ವರದ ವ್ಯವಸ್ಥಾಪಕ ಸದಸ್ಯರಾಗಿ ಹಲವು ವರ್ಷಗಳಿಂದ ಮುಂಬೈ ಹಾಗೂ ಕರ್ನಾಟಕದಲ್ಲಿ ಉದ್ಯಮ ನಡೆಸುತ್ತಿದ್ದ ಅವರು ಧಾರ್ಮಿಕ ಕ್ಷೇತ್ರದಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದಾರೆ.

ಭಾರತ್‌ ಬ್ಯಾಂಕ್‌ ನ ಸ್ಥಾಪಕಾಧ್ಯಕ್ಷ ಜಯ ಸಿ. ಸುವರ್ಣರೊಂದಿಗೆ ಆತ್ಮೀಯರಾಗಿದ್ದರು. ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಮುಂಬೈ ಲಿಮಿಟೆಡ್‌ ಇಲ್ಲಿ ಹತ್ತು ವರ್ಷಗಳಲ್ಲಿ ನಿರ್ದೇಶಕರಾಗಿದ್ದ ಅವರು ಪುನರ್‌ ಆಯ್ಕೆಯಾಗಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter