ಬಂಟ್ವಾಳ:ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವ
ಬಂಟ್ವಾಳ: ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವವು ಬಿ.ಸಿ.ರೋಡಿಗೆ ಸಮೀಪದ ಪೊಸಳ್ಳಿಯಲ್ಲಿರುವ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು. ನಿವೃತ್ತ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಂಜಪ್ಪ ಮೂಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೆಲಸದ ಜಂಜಾಟದಲ್ಲಿದ್ದ ನಿವೃತ್ತರಿಗೆ ಸಮಾಜ ಸೇವೆ ಮಾಡಲು ಇದೊಂದು ಒಳ್ಳೆಯ ಸಂದರ್ಭ ಮಾತ್ರವಲ್ಲ ಹಿರಿಯರ ಸಮಸ್ಯೆಗಳಿಗೆ ಪರಿಹಾರ ದೊಂದಿಗೆ ಯುವಕರಿಗೆ ಮಾರ್ಗದರ್ಶನ ಮಾಡಲು ಸಮಾಜದಲ್ಲಿ ಇಂತಹ ಸಂಘಟನೆಗಳ ಅಗತ್ಯವಿದೆ ಎಂದರು.

ಸಂಘದ ಅಧ್ಯಕ್ಷರಾದ ಟಿ ಶೇಷಪ್ಪ ಮಾಸ್ಟರ್ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ನಾವು ವೃದ್ಧರು ಎಂಬ ಹಿಂಜರಿಕೆ ಬಿಟ್ಟು ನಾವು ಹಿರಿಯರು ಎಂಬ ವಿಶಾಲ ಮನಸ್ಸಿನಿಂದ ಕಾರ್ಯನಿರ್ವಹಿಸಿದಾಗ ಇನ್ನಷ್ಟು ಮಾನಸಿಕ ನೆಮ್ಮದಿ ದೊರೆತು ಅರೋಗ್ಯಪೂರ್ಣವಾಗಿ ಬದುಕಲು ಸಹಾಯವಾಗುವುದು ಎಂದರು. ಕರ್ನಾಟಕ ರಾಜ್ಯ ಕುಲಾಲ,ಕುಂಬಾರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ )ಇದರ ರಾಜ್ಯಾಧ್ಯಕ್ಷರಾದ ಗಂಗಾಧರ್ ಬಂಜನ್ ಕುಳಾಯಿ, ಜಿಲ್ಲಾಧ್ಯಕ್ಷರಾದ ಸುಕುಮಾರ್ ಬಂಟ್ವಾಳ್, ಬಂಟ್ವಾಳ ಕುಲಾಲ ಸುಧಾರಕ ಸಂಘ ಅಧ್ಯಕ್ಷರಾದ ರಾಧಾಕೃಷ್ಣ ಬಂಟ್ವಾಳ್ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷರಾದ ಶೀನ ಮೂಲ್ಯ ಅಲ್ಲಿಪ್ಪಾದೆ ವೇದಿಕೆಯಲ್ಲಿದ್ದರು.
ಈ ಸಂದರ್ಭದಲ್ಲಿ ಮಂಜಪ್ಪ ಮೂಲ್ಯ ಹಾಗೂ 75 ವರ್ಷ ದಾಟಿದ ಹಿರಿಯರಾದ ಸೀತಾರಾಮ ಗೋಳಿನೆಲ, ಜಾರಪ್ಪ ಮೂಲ್ಯ ಭಂಡಾರಿಬೆಟ್ಟು ರವರನ್ನು ಸನ್ಮಾನಿಸಲಾಯಿತು. ಸದಸ್ಯರಾದ ವಿಶ್ವನಾಥ ಸಾಲಿಯಾನ್ ಸನ್ಮಾನಿತರನ್ನು ಪರಿಚಯಿಸಿದರು,ರತ್ನಾವತಿ, ರೋಹಿಣಿ ಅವರು ಅನಿಸಿಕೆ ವ್ಯಕ್ತಪಡಿಸಿದರು. ಶಾಂಭವಿ ಸೋಮಯ್ಯ ಪ್ರಾರ್ಥಿಸಿದರು.ಸಂಘಟನಾ ಕಾರ್ಯದರ್ಶಿ ಕಿಟ್ಟು ಮೂಲ್ಯ ಸ್ವಾಗತಿಸಿದರು.ಜತೆ ಕಾರ್ಯದರ್ಶಿ ಲಕ್ಷ್ಮಣ ಮೂಲ್ಯ ವರದಿ ವರ್ಷದಲ್ಲಿ ನಿಧನರಾದ ಸದಸ್ಯರ ಮಾಹಿತಿ ನೀಡಿದರು. ಇವರಿಗೆ ಒಂದು ನಿಮಿಷ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾರ್ಯದರ್ಶಿ ಪದ್ಮನಾಭ ಎಂ ವರದಿ ವಾಚನಾಲಯ ಸಿದರು. ಕೋಶಾಧಿಕಾರಿ ಸೋಮಯ್ಯ ಮೂಲ್ಯ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷರಾದ ಸೋಮಪ್ಪ ಮೂಲ್ಯ ವಂದಿಸಿದರು. ಭಾರತಿ ಶೇಷಪ್ಪ ಕಾರ್ಯಕ್ರಮ ನಿರೂಪಿಸಿದರು.ಸದಸ್ಯರಾದ ಓಬಯ್ಯ ಮೂಲ್ಯ, ನೀಲಪ್ಪ ಸಾಲಿಯಾನ್, ವಿಠ್ಠಲ್ ಮೂಲ್ಯ ಜಕ್ರಿಬೆಟ್ಟು ಕೃಷ್ಣಶ್ಯಾಮ್ ಹಾಗೂ ಕುಲಾಲ ಯುವವೇದಿಕೆಯ ಸದಸ್ಯರು ನಿತೀಶ್ ಪಲ್ಲಿಕಂಡ ನೇತೃತ್ವ ದಲ್ಲಿ ಸಹಕರಿಸಿದರು.