Published On: Tue, Feb 7th, 2023

ಪಿಲಿಂಗಾಲು: ಗಾಯತ್ರಿ ದೇವಿ ದೇವಸ್ಥಾನ, ಧರ್ಮಸ್ಥಳ ಕ್ಷೇತ್ರದಿಂದ ದೇಣಿಗೆ ಚೆಕ್ ಹಸ್ತಾಂತರ.

ಬಂಟ್ವಾಳ: ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಡಬೆಟ್ಟು ಗ್ರಾಮ ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಸ್ಥಾನಕ್ಕೆ ರೂ 1ಲಕ್ಷ ಮೊತ್ತದ ದೇಣಿಗೆ ಚೆಕ್ ಭಾನುವಾರ ಸಂಜೆ ಹಸ್ತಾಂತರಿಸಲಾಯಿತು.

ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಮಂಜೂರುಗೊಳಿಸಿದ ದೇಣಿಗೆ ಚೆಕ್ಕನ್ನು ವಗ್ಗ ವಲಯ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೇಲ್ವಿಚಾರಕಿ ಸುಜಾತ ಪಿ. ಮತ್ತು ಸೇವಾ ನಿರತೆ ರೇಖಾ ಕಾಡಬೆಟ್ಟು ಹಸ್ತಾಂತರಿಸಿದರು. ರೂ 1ಕೋಟಿ ವೆಚ್ಚದಲ್ಲಿ ಜೀರ್ಣೊದ್ದಾರಗೊಂಡ ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್ .ಪಂಡಿತ್, ಅರ್ಚಕ ಶ್ರೀಪತಿ ಉಡುಪ ಕೆಳಮಂಗಲ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ಪ್ರಮುಖರಾದ ಪುರುಷೋತ್ತಮ ಬಂಗೇರ ನಾಟಿ, ಅಭಿಷೇಕ್ ಗಾಣಿಗ, ಹರೀಶ್ ಪಿಲಿಂಗಾಲು, ಡೊಂಬಯ ಸಪಲ್ಯ ಮತ್ತಿತರರು ಇದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter