ಕೈಕಂಬ:ಗುರುಪುರ ಗೋಳಿದಡಿ ಗುತ್ತುವಿನ ಮನೆಯಲ್ಲಿ ಜನವರಿ ೧೭ರಿಂದ ಜನವರಿ ೧೯ರವರೆಗೆ ನಡೆಯುವ “ಗುತ್ತುದ ವರ್ಷದ ಪರ್ಬೊ” ಪಾದ ನಡವಳಿ ಪುನರ್ ಸಂಧಾನ ಕಾರ್ಯಕ್ರಮದ ಪ್ರಥಮವಾಗಿ ೧೨ನೇ ವರ್ಷದ ತೋರಣ ಮಹೂರ್ತ ಜ.೧೬ರಂದು ಸೋಮವಾರ ನಡೆಯಿತು. ಗುತ್ತಿನ ಗಡಿಕಾರ ಶ್ರೀ ದುರ್ಗಾಪ್ರಸಾದ ಶೆಟ್ಟಿ ಮತ್ತು ಉಷಾ ದುರ್ಗಾಪ್ರಸಾದ್ ಶೆಟ್ಟಿ ತೋರಣ ಮಹೂರ್ತ ನೆರವೇರಿಸಿದರು.



