ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಸಂಸ್ಥೆಯ 50ನೇ ಮಾಸಿಕ ಯೋಜನೆ ಸುವರ್ಣ ಸೇವಾ ಸಂಭ್ರಮ
ಕೈಕಂಬ: ವಿಶ್ವ ಹಿಂದೂ ಪರಿಷತ್ -ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಜೈ, ಶ್ರೀ ರಾಮ್ ಶಾಖೆ ಎಡಪದವು ಇದರ ಆಶ್ರಯದಲ್ಲಿ ಬಜರಂಗದಳ ಸೇವಾ ಬ್ರಿಗೇಡ್ ಎಡಪದವು ಸಂಸ್ಥೆಯ 50ನೇ ಮಾಸಿಕ ಯೋಜನೆಯ ಅಂಗವಾಗಿ ಅಶಕ್ತ ಕುಟುಂಬಗಳಿಗೆ ಸಹಾಯಹಸ್ತ ನೀಡುವ ವೇದಿಕೆ ಸುವರ್ಣ ಸೇವಾ ಸಂಭ್ರಮ ಎಡಪದವಿನ ಶ್ರೀರಾಮ ಮಂದಿರದ ಪಟ್ಟಾಭಿರಾಮ ಸಭಾಭವನದಲ್ಲಿ ನಡೆಯಿತು.

ಹಿಂದೂ ಸಮಾಜದ ಆಶಕ್ತರನ್ನು ಗುರುತಿಸಿ, ಸಮಾಜವನ್ನು ಸಶಕ್ತಿಕರಣ ಮಾಡುವ ಪ್ರಯತ್ನ ಮಾಡಿದ ಎಡಪದವಿನ ವಿಶ್ವ ಹಿಂದು ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾ ವಾಹಿನಿ ಜೈ ಶ್ರೀರಾಮ್ ಶಾಖೆ ಎಡಪದವು ಇವುಗಳ ಆಶ್ರಯದಲ್ಲಿ ಬಜರಂಗದಳ ಸೇವಾ ಬ್ರಿಗೇಡ್ ನ್ನು ಹೆಗ್ಗಳಿಕೆಯಿಂದ ಅಭಿನಂದನೆ ಸಲ್ಲಿಸುವ ಅಗತ್ಯ ಇದೆ. ಈ ಕಷ್ಟದ ಅರಿವು ನಮಗಿದೆ. ಹಿಂದೂ ಸಮಾಜ ಕೆಲವೊಂದು ವ್ಯವಸ್ಥೆಗಳಿಂದ ಹಿಂದುಳಿದಿದೆ. ಅದನ್ನು ಸರಿಪಡಿಸುವ ಕಾರ್ಯವನ್ನು ಈ ಸ್ವಯಂ ಸೇವಾ ಸಂಸ್ಥೆಗಳು ಅಚ್ಚುಕಟ್ಟಾಗಿ ಮಾಡುತ್ತಿವೆ. ಸಮಾಜದೊಳಗೆ ಸಂಗ್ರಹಿಸಿದ 27 ಲಕ್ಷ ರೂ.ಗಳಷ್ಟು ಹಣವನ್ನು ಸಮಾಜಕ್ಕೆ ವಿತರಣೆ ಮಾಡಿದೆ. ಇದು ದೊಡ್ಡ ಸಾಧನೆ ಎಂದು ಗುರುಪುರ ವಜ್ರದೇಹಿ ಮಠ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು.

ಶಾಸಕ ಡಾ| ಭರತ್ ಶೆಟ್ಟಿ ವೈ. ಮಾತನಾಡಿ, ಪ್ರತಿಯೊಬ್ಬರ ಕಣ್ಣೀರು ಒರೆಸುವ ಕಾರ್ಯ ಇಲ್ಲಿನ ಬಜರಂಗದಳ ಮಾಡುತ್ತಿದೆ. ನಮಗೆ ಮನುಷ್ಯತ್ವ ಮುಖ್ಯ. ಈಗಾಗಲೇ 49 ತಿಂಗಳ ಕಾಲ 27ಲಕ್ಷ ರೂಪಾಯಿಯನ್ನು ಆಶಕ್ತ ಜನರಿಗೆ ನೀಡಿದ್ದಾರೆ. ಇಡೀ ಸಮಾಜದ ಪರವಾಗಿ ನಮ್ಮ ಎಲ್ಲರ ಪರವಾಗಿ ಇಲ್ಲಿನ ಬಜರಂಗದಳ ಕಾರ್ಯಕರ್ತರಿಗೆ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ 12 ಆಶಕ್ತ ಕುಟುಂಬಗಳಿಗೆ ಸಹಾಯ ಧನವನ್ನು ವಿತರಿಸಲಾಯಿತು.

ಹಲವು ಸೇವಾ ಸಂಘ ಸಂಸ್ಥೆಗಳನ್ನು ಗುರುತಿಸಿ ಗೌರವಾರ್ಪಣೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಮಂದಿರ ಎಡಪದವು ಇದರ ಅಧ್ಯಕ್ಷ ಗೋಪಾಲ ಗೌಡ ವಹಿಸಿದ್ದರು. ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಭುಜಂಗ ಕುಲಾಲ್, ವಿಹಿಂಪ ಮಂಗಳೂರು ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಮಂಗಳೂರು ಜಿಲ್ಲಾ ಸಂಯೋಜಕ ಪುನೀತ್ ಅತ್ತಾವರ, ಉದ್ಯಮಿ ಚಂದ್ರಹಾಸ್ ಶೆಟ್ಟಿ ನಾರಳ, ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ಅರ್ಜುನ್ ಭಂಡಾರ್ಕರ್, ಅಮೃತ ಸಂಜೀವಿನಿ ಪ್ರಮುಖ ಸುಶಾಂತ್ ಅಮೀನ್ ಚಕ್ರತೀರ್ಥ, ವಿಹಿಂಪ ಗುರುಪುರ ಪ್ರಖಂಡದ ಕಾರ್ಯದರ್ಶಿ ದಿನೇಶ್ ಮಿಜಾರು, ಬಜರಂಗ ದಳ ಸಹಸಂಯೋಜಕ ಹರೀಶ್ ಪಿ. ಎಡಪದವು, ದುರ್ಗಾವಾಹಿನಿ ಗುರುಪುರ ಪ್ರಖಂಡ ಸಹ ಸಂಚಾಲಕಿ ಜಯಶ್ರೀ ಎಸ್., ವಿಹಿಂಪ ಜೈಶ್ರೀ ರಾಮ್ ಚಂದ್ರಕಾಂತ್ ನಾಯಕ್ ಉಪಸ್ಥಿತರಿದ್ದರು.ಸುರೇಖಾ ಅವರು ಸೇವಾ ಬ್ರಿಗೇಡ್ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು. ಮಧುರಾಜ್ ಗುರುಪುರ ನಿರೂಪಿಸಿದರು.
