ಸುರತ್ಕಲ್ ಬಳಿಯ ತಡಂಬೈಲ್ ಎಂಬಲ್ಲಿ ರಾಷ್ಟಿಯ ಹೆದ್ದಾರಿ 66ರಲ್ಲಿ ಉಡುಪಿ ಕಡೆಗೆ ಹೋಗುತ್ತಿದ್ದ ಸುಜ್ಲಾನ್ ಕಂಪೆನಿಯ ಬಸ್ಗೆ ಹಿಂದಿನಿಂದ ಬರುತ್ತಿದ್ದ ಕಾರು ಶನಿವಾರ ಸಂಜೆ ಡಿಕ್ಕಿ ಹೊಡೆದ ಫಲವಾಗಿ ಕಾರಿನಲ್ಲಿದ್ದ ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಮಂಗಳೂರಿನ ಕುದ್ರೋಳಿನಿವಾಸಿ ಮಹಮ್ಮದ್ ಆಶಿಲ್(16) ಎಂಬವರು ಮುಕ್ಕದ ಖಾಸಗಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟರು.


ಕಾರಿನಲ್ಲಿದ್ದ ಇತರ ಐದು ಮಂದಿ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ ಅವರೆಲ್ಲರೂ ಇದೇ ಕಾಲೇಜಿನ ವಿದ್ಯಾರ್ಥಿಗಳೆನ್ನಲಾಗಿದೆ.
ಸುರತ್ಕಲ್ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



