ಬಂಟ್ವಾಳ: ಸರಣಿ ಅಪಘಾತ ತಡೆಗೆ ಎಚ್ಚರಿಕೆ ನಾಮಫಲಕ ಅಳವಡಿಸಲು ಶಾಸಕ ರಾಜೇಶ ನಾಯ್ಕ್ ಸಲಹೆ
ಬಂಟ್ವಾಳ-ಮಣಿಹಳ್ಳ ರಾಷ್ಟ್ರೀಯ ಹೆದ್ದಾರಿ ನಡುವೆ ನಡೆಯುತ್ತಿರುವ ಸರಣಿ ಅಪಘಾತ ತಡೆಯುವ ನಿಟ್ಟಿನಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರೊಂದಿಗೆ ಮಾತುಕತೆ ನಡೆಸಿದರು.

ಬಿಸಿರೋಡು- ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಬಂಟ್ವಾಳ-ಮಣಿಹಳ್ಳ ನಡುವೆ ಪದೇ ಪದೇ ನಡೆಯುತ್ತಿರುವ ಸರಣಿ ಅಪಘಾತ ತಡೆಯುವ ನಿಟ್ಟಿನಲ್ಲಿ ರಸ್ತೆಯಲ್ಲಿ ಎಚ್ಚರಿಕೆ ನಾಮಫಲಕ ಅಳವಡಿಸುವಂತೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಹೇಳಿದ್ದಾರೆ.
ಇಲ್ಲಿನ ಬಂಟ್ವಾಳ ಬೈಪಾಸ್, ಜಕ್ರಿಬೆಟ್ಟು, ಚೆಂಡ್ತಿಮಾರ್ ಮತ್ತಿತರ ಕಡೆಗಳಿಗೆ ಸಂಚಾರಿ ಠಾಣೆ ಸಹಿತ ನಗರ ಠಾಣೆ ಪೊಲೀಸರು ಮತ್ತು ಎಂಜಿನಿಯರ್ ಗಳೊಂದಿಗೆ ಬುಧವಾರ ಸಂಜೆ ತೆರಳಿ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಟ್ಟು ರೂ ೧೫೯ ಕೋಟಿ ವೆಚ್ಚದಲ್ಲಿ ೧೬.೮೫ ಮೀ. ಡಾಂಬರೀಕರಣ ಮತ್ತು ೩.೮೫ ಮೀ. ಕಾಂಕ್ರಿಟೀಕರಣ ರಸ್ತೆ ನಿರ್ಮಾಣಗೊಂಡಿದ್ದು, ವಾಹನಗಳ ಓಡಾಟ ಮತ್ತು ವೇಗವೂ ಹೆಚ್ಚಾಗಿದೆ ಎಂದು ಗುತ್ತಿಗೆದಾರರು ತಿಳಿಸಿದರು.
ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಕಾರ್ಯದರ್ಶಿ ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪ್ರಮುಖರಾದ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಸುದರ್ಶನ ಬಜ, ಗಣೇಶ ರೈ, ವಿಶ್ವನಾಥ ಚೆಂಡ್ತಿಮಾರ್, ಡಿವೈಎಸ್ಪಿ ಪ್ರತಾಪ್ ಸಿಂಗ್ ಥೋರಾಟ್, ಎಸೈ ಅವಿನಾಶ್, ಸಂಚಾರಿ ಠಾಣೆ ಎಸೈ ಮೂರ್ತಿ, ಸಾರಿಗೆ ಡಿಪೋ ಮ್ಯಾನೇಜರ್ ಶ್ರೀಶ ಭಟ್, ಎಂಜಿನಿಯರ್ ಪ್ರಭಾರ ಮಹಾಬಲ ನಾಯಕ್, ಸಹಾಯಕ ಎಂಜಿನಿಯರ್ ಕೀರ್ತಿ ಅಮೀನ್, ಗುತ್ತಿಗೆ ಸಂಸ್ಥೆ ಮೇಲ್ವಿಚಾರಕ ದಾಮೋದರ ಮತ್ತಿರರು ಇದ್ದರು.