Published On: Mon, Jul 4th, 2022

ಮರವಂತೆ ಬೀಚ್ ಗೆ ಕಾರು ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಕುಂದಾಪುರ : ಮರವಂತೆ ಬೀಚ್ ಗೆ ಕಾರೊಂದು ಬಿದ್ದು ನಾಪತ್ತೆಯಾಗಿದ್ದ ರೋಷನ್ ಅವರ ಮೃತದೇಹ ತಡರಾತ್ರಿ ತ್ರಾಸಿಯ ಹೊಸಪೇಟೆ ಸಮೀಪದ ಕಡಲ ಕಿನಾರೆಯಲ್ಲಿ ಜು.04ರಂದು ಸೋಮವಾರ ಪತ್ತೆಯಾಗಿದೆ.
IMG_20220704_170739

ಜು02ರಂದು ಶನಿವಾರ ತಡರಾತ್ರಿ ನಾಲ್ವರು ಸ್ವಿಫ್ಟ್ ಕಾರಿನಲ್ಲಿ ಕುಂದಾಪುರದಿಂದ ಬೈಂದೂರು ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಮರವಂತೆ ಸಮುದ್ರಕ್ಕೆ ಬಿದ್ದಿದೆ ಈ ವೇಳೆ ಕಾರು ಚಾಲನೆ ಮಾಡುತ್ತಿದ್ದ ವಿರಾಜ್ ಆಚಾರ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದು ರೋಷನ್ ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು ಹಾಗೂ ಇಬ್ಬರು ಕಾರಿನಿಂದ ಜಿಗಿದು ಗಾಯಗೊಂಡಿದ್ದರು.

ನಾಪತ್ತೆಯಾಗಿದ್ದ ರೋಷನ್ ಗಾಗಿ ರಕ್ಷಣಾ ತಂಡ ಭಾನುವಾರದಿಂದ ಕಾರ್ಯಾಚರಣೆ ನಡೆಸಿದ್ದು, ಸೋಮವಾರ ಕಾರ್ಯಾಚರಣೆ ನಡೆಸಿ ತ್ರಾಸಿಯ ಹೊಸಪೇಟೆ ಬಳಿ ಮೃತದೇಹ ಪತ್ತೆಯಾಗಿದೆ.

 ಗಂಗೊಳ್ಳಿ ಎಸ್ ಐ ವಿನಯ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಮುಳುಗು ತಜ್ಞರಾದ ಈಶ್ವರ್ ಮಲ್ಪೆ, ದಿನೇಶ್ ಖಾರ್ವಿ ಹಾಗೂ ಸ್ಥಳೀಯರು ಮೃತದೇಹ ಹುಡುಕಾಟಕ್ಕೆ ಸಹಕರಿಸಿದ್ದರು… ಗಂಗೊಳ್ಳಿ ಪೊಲೀಸರು ಸ್ಥಳದಲ್ಲಿದ್ದರು.

.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter