Published On: Tue, Jun 14th, 2022

ತೌಡುಗೋಳಿ: ಕೈ. ವ್ಯ. ಸೇ. ಸ. ಸಂಘದ ನೂತನ‌ ನ್ಯಾಯಬೆಲೆ ಅಂಗಡಿ ಉದ್ಘಾಟನೆ

ತೌಡುಗೋಳಿ: ಕೈರಂಗಳ ವ್ಯವಸಾಯ ಸೇವಾ ಸಹಕಾರ ಸಂಘದ ಎರಡನೆಯ ಶಾಖಾ ಕಚೇರಿ ಆಗಿರುವ ತೌಡುಗೋಳಿಯ “ಚಂದ್ರಗಿರಿ” ಕಟ್ಟಡದಲ್ಲಿ ಸ್ಥಳೀಯ ಗ್ರಾಹಕರ ಬಹುಬೇಡಿಕೆಯಂತೆ ಪಡಿತರ ವಿತರಣೆಗಾಗಿ ನ್ಯಾಯಬೆಲೆ ಅಂಗಡಿ ಜೂ.13ರಂದು ಸೋಮವಾರ ಉದ್ಘಾಟನೆಗೊಂಡಿತು.WhatsApp Image 2022-06-14 at 2.36.40 PM

ಕರ್ನಾಟಕ ಸರ್ಕಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯ ಇಲಾಖೆ ಆಶ್ರಯದಲ್ಲಿ ನರಿಂಗಾನ‌ ಗ್ರಾಮದಲ್ಲಿ ಕೈರಂಗಳ ವ್ಯ.ಸೇ. ಸ.ಸಂಘದ ಎರಡನೇ ನ್ಯಾಯಬೆಲೆ ಅಂಗಡಿಯಾಗಿ ಆರಂಭಗೊಂಡ ನ್ಯಾಯಬೆಲೆ ಅಂಗಡಿಯಿಂದ ಸುಮಾರು ನಲ್ವತ್ತು ಕುಟುಂಬದ ಸದಸ್ಯರು ಪಡಿತರ ಸಾಮಗ್ರಿ ಪಡೆದುಕೊಂಡು ಸಂಸತಸ ಹಂಚಿಕೊಂಡರು.WhatsApp Image 2022-06-14 at 2.36.40 PM (1)

ಶಾಂತಿಪಳಿಕೆ ಶ್ರೀ ಮಿತ್ತ ಮೊಗರಾಯ ದೈವಸ್ಥಾನದ ಮೊಕ್ತೇಸರ ಬಿ. ನಾರಾಯಣ ಶೆಟ್ಟಿ ಭಂಡಾರಮನೆ ದೀಪ ಬೆಳಗಿಸುವ ಮೂಲಕ ನೂತನ ನ್ಯಾಯಬೆಲೆ ಅಂಗಡಿ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೈರಂಗಳ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ, ಕ್ಯಾಂಪ್ಕೋ ನಿರ್ದೇಶಕ ಮಹೇಶ್ ಚೌಟ ಉಳಿಪಾಡಿಗುತ್ತು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರ ಸಂಘಗಳು ಸೇವಾ ಮನೋಭಾವನೆ, ದಕ್ಷತೆ ಹಾಗೂ ಶಿಸ್ತಿನಿಂದ ಕಾರ್ಯನಿರ್ವಹಿಸುತ್ತಿರುವುದರಿಂದಾಗಿ ಲಾಭದ ಜೊತೆಗೆ ಗ್ರಾಹಕ ಸ್ನೇಹಿ ಸಂಸ್ಥೆಗಳಾಗಿ ಅಭಿವೃದ್ಧಿ ಕಾಣುತ್ತಿರಲು ಸಾಧ್ಯವಾಗಿದ್ದು ಗ್ರಾಹಕರು ಹಾಗೂ ಸಿಬ್ಬಂದಿ‌ ಸೇವೆ ಶ್ಲಾಘನೀಯ ಎಂದರು.WhatsApp Image 2022-06-14 at 2.36.39 PM

ಹಿರಿಯ ನಿರ್ದೇಶಕ ಜನಾರ್ದನ‌ ಗಟ್ಟಿ ಕನ್ನಿಮನೆ ಮಾತನಾಡಿ ಸರಕಾರದ ಕಠಿಣ ನಿಯಮದಡಿಯಲ್ಲಿ ಗ್ರಾಹಕರಿಗೆ ಸಾಲ‌ ವಿತರಿಸುತ್ತಿರುವುದರಿಂದಾಗಿ ವಸೂಲಾತಿ ಸಮಸ್ಯೆ ಇಲ್ಲ, ಎಲ್ಲ‌ ದಾಖಲಗೆಗಳು ಸಮರ್ಪಕವಾಗಿದ್ದರೆ ಸಾಲ‌ವಿತರಣೆ ಸುಲಭ, ಹಾಗೆಯೇ ಸಂಘದಲ್ಲಿ ಠೇವಣಿ ಇಟ್ಟವರಿಗೆ ಭದ್ರತೆಯನ್ನು ನೀಡಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಡತರ ವ್ಯವಸ್ಥೆಗೆ ಅಹರ್ನಿಶಿ ದುಡಿದ ನಿರ್ದೇಶಕ ಉದಯ ಶಂಕರ ಶೆಟ್ಟಿ ಬಲೆತ್ತೋಡು ಅವರನ್ನು ಗೌರವಿಸಲಾಯಿತು.WhatsApp Image 2022-06-14 at 2.36.39 PM (1)

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಉಷಾ ಎಸ್. ರಾಮ್ ಕೈರಂಗಳ, ನಿರ್ದೇಶಕರುಗಳಾದ ಡಿ. ಶಂಕರ್ ಭಟ್ ದೋಸೆಮನೆ, ಉಗ್ಗಪ್ಪ ಮಾಣೈ ಬೀರೂರು, ಉದಯ ಶಂಕರ ಶೆಟ್ಟಿ ಬಲೆತ್ತೋಡು, ಗಿರೀಶ್ ಜೋಗಿ ಬೆಳ್ಳೇರಿ, ಪೂವಪ್ಪ ಕಡಂಬಾರು, ವಾಮನ ನಾಯ್ಕ, ಅನ್ನಪೂರ್ಣೇಶ್ವರೀ, ಲಕ್ಷ್ಮಣ ಯಾನೆ ಕಾಂತ, ಮುನೀರ್ ಮಾಸ್ಟರ್ ತೋಟಾಲ್ ಹಾಗೂ ನವೀನ್ ಶೆಟ್ಟಿ ಮಂಗಲ್ಪಾಡಿ, ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೋಸೆಫ್ ಕುಟ್ಟಿನ್ಹ, ಸದಸ್ಯ ಸುಂದರ ಪೂಜಾರಿ ಕೋಡಿಮಜಲು ಹಾಗೂ ಗ್ರಾಹಕರ ಪರವಾಗಿ ಸಂಕಪ್ಪ ಶೆಟ್ಟಿ ಪುಳಿಂಕೆತ್ತಡಿ ಉಪಸ್ಥಿತರಿದ್ದರು.

ಉದ್ಯಮಿ ವಿವೇಕಾನಂದ ರೈ ನೆತ್ತಿಲಕೋಡಿ, ಪ್ರೇಮಾನಂದ ರೈ ನೆತ್ತಿಲಕೋಡಿ, ನರಿಂಗಾನ ಯುವಕ ಮಂಡಲದ ಮಾಜಿ ಅಧ್ಯಕ್ಷ ವಿನೋದ್ ಸುವರ್ಣ ನಿಡ್ಮಾಡ್, ನಿಕಟಪೂರ್ವ ಅಧ್ಯಕ್ಷ ಗಿರೀಶ್ ಆಳ್ವ ಗರೋಡಿ, ಅಬ್ಬಾಸ್ ಹಾಜಿ ಶಾಂತಿಪಳಿಕೆ, ಚಂದ್ರಶೇಖರ್ ಶೆಟ್ಟಿ ಮರಿಕ್ಕಳ, ಶ್ರೀನಾಥ್ ರೈ ಗರೋಡಿ, ರೋಬರ್ಟ್ ಕುಟ್ಟಿನ್ಹ ಬೋಳ, ವಸಂತ ಮರ್ಚೆಂಟ್ ತೌಡುಗೋಳಿ, ಅಬ್ದುಲ್ಲ ಕೆ. ಕೊಡಂಚಿಲ್, ಪುರಂದರ ಎಸ್. ಸರ್ಕುಡೇಲು, ಸತ್ಯನಾರಾಯಣ ಭಟ್ ಎಡಂಬಲೆ, ಲೋಕೇಶ್ ಭಂಡಾರಮನೆ, ವೆಂಕಪ್ಪ ಬೆರ್ಮದೆ, ಹಮೀದ್ ಎಸ್ ಶಾಂತಿಪಳಿಕೆ, ಮಹೇಶ್ ಶೆಟ್ಟಿ ಗರೋಡಿ, ಬಾವುಚ್ಚ ತೌಡುಗೋಳಿ, ಕುಂಞ ತೌಡುಗೋಳಿ, ವಿಕ್ಟರ್ ಬೋಳ, ನಿತಿನ್ ನಿಡ್ಮಾಡ್, ಪದ್ಮನಾಭ ಸರ್ಕುಡೇಲು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಭಾವತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಚಂದ್ರಹಾಸ್ ಎಲ್. ಸರ್ಕುಡೇಲು ವಂದಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯ್ ಕಾರ್ಯಕ್ರಮ ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter