ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜಾತ್ರಾಮಹೋತ್ಸವದ ನಾಲ್ಕನೇ ದಿನದ ಚೆಂಡಿನ ಉತ್ಸವವು ಪೂಜಾ ವಿಧಿವಿಧಾನಗಳು ನಡೆದ ಬಳಿಕ ಭಾನುವಾರ ನಡೆಯಿತು. ಚೆಂಡಿನ ಗದ್ದೆಯಲ್ಲಿ ಸಾಂಪ್ರದಾಯದAತೆ ಚೆಂಡನ್ನು ಮೂರು ಬಾರಿ ಚೆಂಡಿನ ಗದ್ದೆಯ ಲ್ಲಿ ಮುಟ್ಟಿಸಿ ಕೊಂಬು ವಾಧ್ಯದೊಂದಿಗೆ ಚೆಂಡನ್ನು ದೇವಸ್ಥಾನದ ಒಂದು ಸುತ್ತು ತಂದು ದೇವರ ಪೂಜೆ ನೆರವೇರಿತು.
ದೇವಳದ ತಂತ್ರೀಗಳಾದ ಸುಬ್ರಹಣ್ಯ ತಂತ್ರೀ, ವೆಂಕಟೇಶ್ ತಂತ್ರೀ ಅರ್ಚಕರಾದ ಮಾಧವ ಭಟ್ , ನಾರಾಯಣ ಭಟ್, ಕೆ.ರಾಮ್ ಭಟ್, ಪರಮೇಶ್ವರ ಭಟ್, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಅನುವಂಶಿಕ ಮೊಕ್ತೇಸರರಾದ, ಯು. ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ ಮತ್ತು ಸಾವಿರ ಸೀಮೆಯ ಭಕ್ತಾಧಿಗಳು ಉಪಸ್ಥಿತರಿದ್ದರು.



