ಮುಂಬಯಿ : ನಿವೃತ್ತ ಸೆಂಟ್ರಲ್ ರೈಲ್ವೇ ಕರ್ಮಚಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ಬಾರ್ಕೂರು ನಾಗರಮಠ ಮೂಲತಃ ರಘುನಾಥ ಕಾಮತ್ (೯೩.) ಇವರು ಕಳೆದ ಮಾ.೧೯ರಂದು ಶನಿವಾರ ಡೊಂಬಿವಲಿ ಇಲ್ಲಿನ ಸುಪುತ್ರನ ನಿವಾಸದಲ್ಲಿ ವಯೋ ಸಹಜತೆಯಿಂದ ನಿಧನರಾದರು.
ಸುಮಾರು ನಾಲ್ಕು ದಶಕಗಳ ಕಾಲ ಮುಂಬಯಿ ಇಲ್ಲಿನ ಸೆಂಟ್ರಲ್ ರೈಲ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಜೀವನ ಸಾಗಿಸುತ್ತಿದ್ದರು. ಮೃತರು ಪತ್ನಿ, ಎರಡು ಗಂಡು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
