ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರದಲ್ಲಿ ಮಾ.19ರಂದು ಶನಿವಾರ ಏರ್ಪಡಿಸಿದ್ದ ‘ಜನೌಷಧಿ ದಿವಸ್’ ಕಾರ್ಯಕ್ರಮದಲ್ಲಿ ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಕುಮಾರ್ ಚೌಟ ವೀಲ್ ಚೇರ್ ಹಸ್ತಾಂತರಿಸಿದರು.

ಪ್ರಮುಖರಾದ ಮನೋಜ್ ಕುಲಾಲ್, ಯಾದವ ಗಟ್ಟಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಪೂಜಾರಿ ಅಳಕೆ, ಸುರೇಶ ಕುಲಾಲ್, ಸಂದೇಶ ಶೆಟ್ಟಿ ಪೊಡುಂಬ, ಗೋಪಿನಾಥ ರೈ, ಉಮ್ಮರ್ ಮುಸ್ಲಿಯಾರ್, ಹೊನ್ನಯ ಕುಲಾಲ್, ರೇವತಿ ಮತ್ತಿತರರು ಇದ್ದರು.
