ಪೊಳಲಿ: ಮಾ.04ರಂದು ಶುಕ್ರವಾರ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ 187ನೇ ಶುಭ ಜನ್ಮದಿನೋತ್ಸವದ ಪ್ರಯುಕ್ತ ಬೆಳಿಗ್ಗೆ 5.30ರಿಂದ ವಿಷ್ಣು ಸಹಸ್ರನಾಮ ಪಾರಾಯಣ, 6.00ರಿಂದ 10,30 ಮತ್ತು ಮಧ್ಯಾಹ್ನ 2.00 ರಿಂದ 8.00ರವರೆಗೆ ವಿವಿಧ ಭಜನಾ ತಂಡದವರಿಂದ ವಿಶೇಷ ಭಜನೆ. 7ಗಂಟೆಗೆ ವಿಶೇಷ ಪೂಜೆ, 10.30 ಹೋಮ, ಮಧ್ಯಾಹ್ನ 12.30: ಆರತಿ 1.00 ಅನ್ನಪ್ರಸಾದ ಸ್ವೀಕರಿಸಲಾಯಿತು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಇದ್ದರು.

ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ 13ನೇವಾರ್ಷಿಕೋತ್ಸವವನ್ನು ಮಾ.11ರಂದು ಶುಕ್ರವಾರ ಆಶ್ರಮದಲ್ಲಿ 11 ಕಾರ್ಯಕ್ರಮದೊಂದಿಗೆ ಆಚರಿಸಲಾಗುತ್ತದೆ. ಉಷಾ ಆರತಿಯ ನಂತರ ವಿಷ್ಣು ಸಹಸ್ರನಾಮ ಪಠಣ ಮತ್ತು , ಹೋಮ , ವಿಶೇಷ ಭಜನಾ ಸಂಕೀರ್ತನೆಯೊದಿಗೆ ಶ್ರೀ ರಾಮಕೃಷ್ಣರವರಿಗೆ ವಿಶೇಷ ಪೂಜೆ ನಡೆಯಲಿದೆ.

ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ 13ನೇ ವಾರ್ಷಿಕೋತ್ಸವ ಬೆಳಿಗ್ಗೆ 8.30ರಿಂದ 11.30ರವರೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಚಂಡಿಕಾಹೋಮ, ಮಧ್ಯಾಹ್ನ 01ರಿಂದ 02 ಅನ್ನಪ್ರಸಾದ, 2ರಿಂದ 4,00- ಯಕ್ಷಗಾನ ತಾಳಮದ್ದಳೆ – ‘ಶ್ರೀ ಹರಿದರ್ಶನ, 4ರಿಂದ ಸಿತಾರ್ ರತ್ನ ಶ್ರೀ ಕೋಚಿಕಾರ್ ದೇವದಾಸ್ ಪೈಯವರಿಂದ ಸಿತಾರ್ ವಾದನ
