ಕೈಕಂಬ: 2021- 22 ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಫೆ.16ರಂದು ಬುಧವಾರ ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲ್ಲಿಪಾಡಿ ಅಂಗನವಾಡಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಶಿಲಾನ್ಯಾಸ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಕರಿಯಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಉಪಾಧ್ಯಕ್ಷೆ ವೀಣಾ ಆಚಾರ್ಯ , ಗ್ರಾಂ.ಪಂ ಸದಸ್ಯರಾದ ಲಕ್ಷ್ಮೀಶ್ ಶೆಟ್ಟಿ , ಕಿಶೋರ್ ಪಲ್ಲಿಪಾಡಿ, ರಾಜು ಕೋಟ್ಯಾನ್, ಗುತ್ತಿಗೆದಾರ ಅಬುಬಕ್ಕರ್ ಅಮ್ಮುಂಜೆ ,ವಿಜಯ ಪಲ್ಲಿಪಾಡಿ, ಅಭಿವೃದ್ಧಿ ಅಧಿಕಾರಿ ಮಾಲಿನಿ, ಲೋಕೇಶ್ ಪಲ್ಲಿಪಾಡಿ, ರೋಶನ್ ಪುಂಚಮೆ, ಉಪೇಂದ್ರ ಆಚಾರ್ಯ ಮತ್ತಿತರರು ಇದ್ದರು

