ಕೈಕಂಬ : ಗುರುಪುರ ಗ್ರಾಮ ಪಂಚಾಯತ್ನಲ್ಲಿ ಗುರುವಾರ(ಜ. ೧೩) ಸ್ವಾಮಿ ವಿವೇಕಾನಂದರ ೧೫೯ನೇ ಜನ್ಮ ದಿನಾಚರಣೆ ಹಾಗೂ ‘ಆಜಾದಿ ಕಾ ಅಮೃತ ಮಹೋತ್ಸವ್’ ಪ್ರಯುಕ್ತ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ‘ಯುವ ಸಪ್ತಾಹ’ ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿ ಪತ್ರಕರ್ತ ಧನಂಜಯ ಅವರು “ಯುವ ಜನತೆಗೆ ಸ್ಪೂರ್ತಿ ಸ್ವಾಮಿ ವಿವೇಕಾನಂದ” ವಿಷಯದಲ್ಲಿ ಮಾತನಾಡಿ, ವಿವೇಕಾನಂದರ ನುಡಿಯಂತೆ ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಇಂದಿಗೂ ಪ್ರಸ್ತುತ. ಪೋಲಾಗುತ್ತಿರುವ `ಯುವಶಕ್ತಿ’ ತಡೆ ಯುವಶಕ್ತಿಯಿಂದಲೇ ಸಾಧ್ಯ ಎಂದರು. ವಿಕಲಚೇತನ ಇಲಾಖೆಯ ಸಿಬ್ಬಂದಿ ಜಯಪ್ರಕಾಶ್ ಮಾತನಾಡಿ, ವಿಕಲಚೇತನರಿಗೆ ಲಭ್ಯವಿರುವ ಸರ್ಕಾರದ ಯೋಜನೆಗಳ ಮಾಹಿತಿ ನೀಡಿದರು. ಪಂಚಾಯತ್ ಪಿಡಿಒ ಸ್ವಾಗತಿಸಿ ವಂದಿಸಿದರು.
