ಕೊಡಗು: ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ನಟರಾದ ಚಿರಂಚೀವಿ ಸರ್ಜಾ, ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ಅಗಲಿದ್ದು ಇನ್ನೂ ಕಣ್ಮುಂದೆಯೇ ಇದೆ. ಇಂತಹದ್ದೇ ‘ವಿಧಿಯ ಅನ್ಯಾಯದ ಸಾವು’ ಕೊಡಗಿನಲ್ಲಿ ನಡೆದಿದೆ.
ಕೇವಲ 22 ವರ್ಷದ ಯುವಕ ಆಟವಾಡುವಾಗ ಮೈದಾನದಲ್ಲೇ ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪಿರುವ ಶಾಕಿಂಗ್ ಘಟನೆ ನಡೆಸಿದೆ. ಹೃದಯಾಘಾತದಿಂದ ಹಾಕಿ ಕ್ರೀಡಾಪಟು ಸೋಮಯ್ಯ (22) ಮೈದಾನದಲ್ಲೇ ಮೃತಪಟ್ಟಿದ್ದಾರೆ.
ಮಡಿಕೇರಿ ತಾಲ್ಲೂಕಿನ ಮೂರ್ನಾಡಿನಲ್ಲಿ ನಡೆಯುತ್ತಿದ್ದ ಸ್ಥಳೀಯ ಹಾಕಿ ಪಂದ್ಯದ ವೇಳೆ ದುರ್ಘಟನೆ ನಡೆದಿದೆ. ಹಾಕಿ ಹಾಡುತ್ತಿರುವಾಗಲೇ ಹೃದಯಾಘಾತದಿಂದ ಸೋಮಯ್ಯ ಕುಸಿದು ಬಿದ್ದಿದ್ದಾರೆ.
ಮೈದಾನದಲ್ಲಿ ಕುಸಿದು ಬಿದ್ದ ಸೋಮಯ್ಯರನ್ನು ಮಡಿಕೇರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಸಾವು ಸಂಭವಿಸಿದೆ. ವಿಠಲ್ ದೇವಯ್ಯ ಎಂಬುವವರ ಪುತ್ರ ಸೋಮಯ್ಯ ಸಾವು ಎಲ್ಲರನ್ನೂ ಅಘಾತಕ್ಕೀಡು ಮಾಡಿದೆ.
ಕೊಡಗಿನಲ್ಲಿ ಹಾಕಿಗೆ ತನ್ನದೇ ಆದ ಮಹತ್ವವಿದೆ. ಕೊಡವರ ಹಾಕಿಗೆ ದೊಡ್ಡ ಇತಿಹಾಸವಿದೆ. ಅಂತದ್ದರಲ್ಲಿ ಯುವ ಆಟಗಾರ ಕೇವಲ 22 ವರ್ಷದ ಯುವಕ ಮೈದಾನದಲ್ಲೇ ಉಸಿರು ಚೆಲ್ಲಿರುವುದು ಕೊಡಗಿನ ಹಾಕಿ ಆಟಗಾರರು, ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ
