ಎಡಪದವು: ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ ಜನ್ಮದಿನದ ಪ್ರಯುಕ್ತ ಎಡಪದವು ಶ್ರೀ ರಾಮ ಮಂದಿರದಲ್ಲಿ ವಿಶೇಷ ರಂಗಪೂಜೆ ಯನ್ನು ಶ್ರೀ ರಾಮದೇವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಡಪದವು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರಸಾದ ಕುಮಾರ್ ಎಂ ಶಕ್ತಿಕೇಂದ್ರ ಪ್ರಮುಖರಾದ ರಾಮಚಂದ್ರ ಪೂಜಾರಿ ಕುಶಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಕುಮಾರ್ ಹಿರಿಯರಾದ ಗೋಪಾಲದಾಸ್ ಶಿವರಾಯ ಪ್ರಭು ವಿಶ್ವನಾಥ್ ಶೆಟ್ಟಿ ಮಂದಿರದ ಅಧ್ಯಕ್ಷರಾದ ಮುರಳಿಧರ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.
ವಿಶೇಷವಾಗಿ ಅರ್ಚಕರಾದ ಸುರೇಶ್ ಭಟ್ ಅವರು ಮೋದಿಜಿ ಅವರಿಗೆ ದೀರ್ಘಾಯುಷ್ಯ ಆರೋಗ್ಯ ಕರುಣಿಸಲೆಂದು ಶ್ರೀರಾಮ ದೇವರಲ್ಲಿ ಪ್ರಾರ್ಥಿಸಿದರು ಮುತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸತೀಶ್ ಬಳಜಿ ಕುಲವೂರು ಶಕ್ತಿಕೇಂದ್ರ ಪ್ರಮುಖರು ಮಹಾಬಲ ಪೂಜಾರಿ ಭಾಗವಹಿಸಿದ್ದರು
