ಮುಂಬಯಿ: ತಮಿಳುನಾಡು ಯುವಕಾಂಗ್ರೆಸ್ ಶೋಷಿಯಲ್ ಮೀಡಿಯಾ ಉಸ್ತುವಾರಿಯಾಗಿ ಮುಂಬಯಿ ಯುವಕನ್ನಡಿಗ ಸಾಗರ್ ಕಟೀಲ್ ನೇಮಕಗೊಂಡಿದ್ದಾರೆ.
ಮೂಲತಃ ಮಂಗಳೂರಿನ ಕಟೀಲ್ನವರಾದ ಅವರು ಮುಂಬಯಿಯ ಕೆಲವು ತುಳು ಕನ್ನಡ ಸಂಘಟನೆಗಳಲ್ಲಿ ಕ್ರೀಯಾಶೀಲರಾಗಿದ್ದು ಉತ್ತಮ ಸಮಾಜ ಸೇವಕರಾಗಿ ರಾಜಕೀಯ ರಂಗದಲ್ಲೂ ಗುರುತಿಸಲ್ಪಟ್ಟಿದ್ದಾರೆ.
ತಮಿಳುನಾಡು ಯುವ ಕಾಂಗ್ರೆಸ್ನ ದ ಕ ತಾಣದ ಪ್ರಮುಖರಾಗಿ ನೇಮಕಗೊಂಡ ಅವರು ರಾಜ್ಯದ ಅಧ್ಯಕ್ಷ ಹಾಗೂ ತಮಿಳುನಾಡು ಯೂತ್ ಕಾಂಗ್ರೆಸ್ ಕಮಿಟಿಯ ಸೋಷಿಯಲ್ ಮೀಡಿಯಾ ಟೀಮ್ನೊಂದಿಗೆ ಕಾರ್ಯ ನಿರ್ವಹಿಸಲಿದ್ದಾರೆ.
