ಪೊಳಲಿ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಮೃತುವರ್ಜಿಯಲ್ಲಿ ಜನತೆಗೆ ಉತ್ಕೃಷ್ಡವಾದ ಉಚಿತ ಆರೋಗ್ಯ ಸೇವೆ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಗ್ರಾಮದ ಆರೋಗ್ಯ ಸುರಕ್ಷತೆಯ ಜಾಗೃತಿಯ ಸಲುವಾಗಿ ಕರಿಯಂಗಳ ಗ್ರಾಮಪಂಚಾಯತಿ ವ್ಯಾಪ್ತಿಯ ಪೊಳಲಿ ದೇವಸ್ಥಾನದ ರಥಬೀದಿಯಲ್ಲಿ ಸಾರಿಗೆಸುರಕ್ಷಾ (ಸಂಚಾರಿ ಐಸಿಯು) ಆರೋಗ್ಯ ಬಸ್ ನಲ್ಲಿ ಆರೋಗ್ಯ ತಪಾಸಣೆಯು ಸೋಮವಾರ ನಡೆಯಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಂಡರು.
ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಯಶವಂತ ಪೂಜಾರಿ,ವೆಂಕಟೇಶ್ ನಾವಡ, ಗ್ರಾ.ಪಂ ಸದಸ್ಯ ಲೊಕೇಶ್ ಭರಣಿ, ಕಿಶೋರ್ ಪಲ್ಲಿಪಾಡಿ, ಸುಬ್ರಾಯ ಕಾರಂತ ಮತ್ತಿತರರು ಇದ್ದರು.


