ಪೊಳಲಿ: ಇತ್ತಿಚಿಗೆ ಮಾದುಕೋಡಿಯಲ್ಲಿ ಶಂಬೂರು ಗ್ರಾಮದ ನಿತ್ಯ ನಿವಾಸಿ ಜನಾರ್ಧನ್ ಇವರು ಆಕಸ್ಮಿಕವಾಗಿ ಮೃತ ಪಟ್ಟಿದ್ದು ಬಂಟ್ವಾಳ ಶಾಸಕರ ಶಿಪಾರಾಸಿನ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಜೂರಾದ ೫ ಲಕ್ಷದ ಚೆಕ್ನ್ನು ಮೃತ ಜನಾರ್ಧನ್ ಅವರ ಪತ್ನಿ ಹರ್ಷಿತ ಅವರಿಗೆ ಗುರುವಾರ ಪೊಳಲಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಂಸ್ತಾ0ತರಿಸಿದರು. ಈ ಸಂದರ್ಭದಲ್ಲಿ ತಾ.ಪಂ.ಸದಸ್ಯ ಯಶವಂತ್ ಪೊಳಲಿ, ವೆಂಕಟೇಶ್ ನಾವಡ ಪೊಳಲಿ, ಕಿಶೋರ್ ಪಲ್ಲಿಪಾಡಿ, ವಜೃನಾಥ್ ಕಲ್ಲಡ್ಕ, ಸುರೇಶ್ ಮಣಿಕಂಠಪುರ, ಕರಿಯಂಗಳ ಗ್ರಾ.ಪಂ. ಸದಸ್ಯೆ ಗೀತಾ ಬಾಲಕೃಷ್ಣ ಉಪಸ್ಥಿತರಿದ್ದರು.

