ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾಮಹೋತ್ಸವವು ಮೀನ ಮಾಸ ಸಂಕ್ರಮಣದ ಮಾ.೧೪ರಂದು ರಾತ್ರಿ ದ್ವಜರೋಹಣಗೊಂಡಿತು. ಮಾರ್ಚ್ ೧೫ರಂದು ಬೆಳಗ್ಗೆ ದೀಪದಬಲಿ (ಕಂಚಿಲ ಬಲಿ) ನಡೆದು ಮಕ್ಕಳ ಕಂಚಿಲು ಸೇವೆ ಮತ್ತು ರಥೊತ್ಸವವು ನಡೆಯಿತು.

15vp polali 03

ನಂತರ ಅವಭೃತದ ದಿನವನ್ನೂ ದೇವಳದ ಗೋಪುರದಲ್ಲಿ ನೆರೆದಿದ್ದ ಸಾವಿರ ಸೀಮೆಯ ಭಕ್ತರ ಸಮಕ್ಷಮದಲ್ಲಿ ಅರಸುದೈವದ ಆಯುಧ ಹಿಡಿದ ಪಂಬದ ವೇಷದಾರಿಗಳು ನರ್ತನ ಮಾಡಿ ಹಿಂಗಾರದ ಹಾಳೆಯನ್ನು ಸೇರಿಗಾರ ನೀಡಿದ ಮೇಲೆ ಪಂಬದರ ಕಿವಿಯಲ್ಲಿ (೨೯ ಪೋಪಿನಾನಿ ಆರಡ ) ಎಂದು ಮೂರು ಭಾರಿ ಕೂಗುತ್ತಾನೆ ಈ ವರ್ಷದ ಜಾತ್ರೆಯು ೨೯ ದಿನ ಬಂದಿರುತ್ತದೆ.15vp 2

ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಅನುವಂಶಿಕ ಮೊಕ್ತೇಸರರಾದ ಯು. ತಾರನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್,ಕ್ಷೇತ್ರದಪ್ರಧಾನ ಅರ್ಚಕ, ಮೊಕ್ತೇಸರ ಮಾಧವ ಭಟ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತಿನವರು, ಅಮ್ಮುಂಜೆ ಗುತ್ತಿನವರು,ಸುಬ್ರಹ್ಮಣ್ಯ ತಂತ್ರಿ ಹಾಗೂ ಅರ್ಚಕರು ಕ್ಷೇತ್ರದ ಕಾರ್ಯನಿರ್ವಾಹಣಾಧಿಕಾರಿ ಪಿ. ಜಯಮ್ಮ ಹಾಗೂ ಸಾವಿರ ಸೀಮೆಯ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು.15vppolali5

15vp 5

By suddi9

Leave a Reply

Your email address will not be published. Required fields are marked *