ಪೊಳಲಿ: ಕುಲಾಲ ಸಮಾಜ ಬಾಂಧವರ ಶ್ರೀ ರಾಜರಾಜೇಶ್ವರೀ ಸೇವಾ ಸಮಿತಿ ಪೊಳಲಿ ಇವರಿಂದ ಬ್ರಹ್ಮಕಲಶದ ಸಂದರ್ಭ ೫೦ಕೆ.ಜಿ.ಬೆಳ್ಳಿಯ ದಾರಂದ ಬಾಗಿಲು ಹಾಗೂ ದಳಿ ಯನ್ನು ಗಣಪತಿ, ಸುಬ್ರಹ್ಮಣ್ಯ ಸ್ವಾಮಿ, ಭದ್ರಕಾಳಿ ಅಮ್ಮನವರಿಗೆ ಸಮರ್ಪಿಸಲಾಗಿತ್ತು. ಈ ಭಾರಿಯ ಕಲಾಶಾಭಿಷೇಕದ ಸಂದರ್ಭ ೪.ಕೆ.ಜಿ. ಬೆಳ್ಳಿಯಿಂದ ತಯಾರಿಸಲ್ಪಟ್ಟ ನೆಗಲೆ ಬಾಯಿ ಹಾಗೂ ಅಭಿಷೇಕ ಪೀಠವನ್ನು ಫೆ.೧೬ರಂದು ಮಂಗಳವಾರ ಶ್ರೀ ರಾಜರಾಜೇಶ್ವರೀ ತಾಯಿಗೆ ಸಮರ್ಪಿಸಲಾಯಿತು.
ದೇವಳದ ತಂತ್ರಿ ಸುಬ್ರಹ್ಮಣ್ಯ , ಅರ್ಚಕರಾದ ಪದ್ಮನಾಭ ಭಟ್, ಅನಂತ ಭಟ್ ಅವರ ಸಮ್ಮುಖದಲ್ಲಿ ನೀಡಲಾಯಿತು. ಕುಲಾಲ ಸಮಾಜದ ಶ್ರೀ ಶ್ರೀ ಶಿವಾನಂದ ಸ್ವಾಮೀಜಿ ವೈಷ್ಣವಿ ಕ್ಷೇತ್ರ ಮುಳಿಯಾ, ಮಂಗಳೂರು ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷ ಶ್ರೀನೀವಾಸ,ಶಾಂತಪ್ಪ ಮೂಲ್ಯ, ಪ್ರಮೀಳ ಮಾಣೂರು, ಯಶೋಧರ ಪೊಳಲಿ, ಸುಂದರ ಬಂಗೇರಾ, ಚಂದ್ರಹಾಶ ಪಲ್ಲಿಪಾಡಿ,ರಾಘವ,ಗೋಪಾಲ , ವೀಶಾಲಾಕ್ಷಿ, ಜಲಜಾಕ್ಷಿ, ತನ್ವಿ, ಜಯಶೀಲ ಮೂಡುಶೆಡ್ಡೆ, ರಮೇಶ್ ಉಪಸ್ಥಿತರಿದ್ದರು.


