ಬಂಟ್ವಾಳ: ಖಾಸಗಿ ದೇವಾಲಯಗಳನ್ನೆಲ್ಲ ಕರ್ನಾಟಕ ಸರ್ಕಾರ ವಶಕ್ಕೆ ಪಡೆಯುವ ಹುನ್ನಾರ ಮಾಡುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು, ಆ ವಿಚಾರದ ಪ್ರಸ್ತಾಪವೇ ಇಲ್ಲ ಎಂದು ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಸ್ಪಷ್ಟಪಡಿಸಿದ್ದಾರೆ.soorya.n bhutt

ಕೆಲವೊಂದು ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ, ಸಂದೇಶಗಳು ರವಾನೆಯಾಗುತ್ತಿದ್ದು, ಇದು ಜನರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಸರ್ಕಾರದ ಬಳಿ ಧಾರ್ಮಿಕ ದತ್ತಿಗೆ ಒಳಪಡುವ ದೇವಸ್ಥಾನಗಳಲ್ಲದೆ, ಖಾಸಗಿ ದೇವಸ್ಥಾನಗಳ ಕುರಿತ ಮಾಹಿತಿ ಸಂಗ್ರಹಗಳನ್ನು ಮಾಡುವುದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ಈ ವದಂತಿ ಹಬ್ಬಿಸಲಾಗುತ್ತಿದೆ. ಹಿಂದು ಧಾರ್ಮಿಕ ದತ್ತಿ ಇಲಾಖೆ ಹಿಂದುಗಳ ಹಿತರಕ್ಷಣೆ ಮಾಡುತ್ತೇವೆಯೇ ವಿನಃ ಖಾಸಗಿ ದೇವಾಲಯಗಳನ್ನು ಸರ್ಕಾರದ ವಶಕ್ಕೆ ಪಡೆಯುವುದಿಲ್ಲ.

ಅಂಥ ತೀರ್ಮಾನವನ್ನು ರಾಜ್ಯದ ಧಾರ್ಮಿಕ ಪರಿಷತ್ತು ತೆಗೆದುಕೊಳ್ಳಲಿಲ್ಲ, ಸಚಿವರೂ ತೆಗೆದುಕೊಳ್ಳಲಿಲ್ಲ. ಹಿಂದುಗಳ ದೇವಾಲಯಗಳ ರಕ್ಷಣೆಗೆ ಕಟಿಬದ್ಧವಾಗಿದ್ದೇವೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *