ಮೂಡುಬಿದಿರೆ: ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು
ಜೈನ್ ಡಿಜಿಟಲ್ ಈ-ಲೈಬ್ರರಿ ಅನ್ನು ಅನ್‍ಲೈನ್ ಮುಖಾಂತರ ಲೋಕಾರ್ಪಣೆಗೊಳಿಸಿದರು.

ಆಧುನಿಕ ಯುಗದಲ್ಲೂ ಕೂಡ ಜೈನ ಧರ್ಮದ ಶಾಸ್ತ್ರ ಗ್ರಂಥಗಳು ಆಧುನಿಕತೆಯ ರೂಪ ಪಡೆದು ದೇಶ ವಿದೇಶದ ಎಲ್ಲಾ ಜನರಿಗೆ ತಲುಪುವಂತೆ ಆಗಲಿ. ಈ ಮೂಲಕ ಎಲ್ಲರೂ ಆತ್ಮಕಲ್ಯಾಣ ಮಾಡಿಕೊಂಡು ಪಾವನರಾಗಲಿ ಎಂದು ಭಟ್ಟಾರಕಶ್ರೀ ಆಶೀರ್ವದಿಸಿದರು.
ಮೈಸೂರಿನ ಡಾ.ತೇಜಸ್ವಿನಿ, ಸುಷ್ಮಾ ಗಣೇ, ಜೈನ್ ಮಿಲನ್ ವಲಯ 8ರ ಅಧ್ಯಕ್ಷ ಪುಷ್ಪರಾಜ್ ಜೈನ್ ಸಹಿತ ಪ್ರಮುಖರು ಅನ್‍ಲೈನ್ ಮೂಲಕ ಭಾಗವಹಿಸಿದರು.
ಜೈನ್ ಡಿಜಿಟಲ್ ಈ-ಲೈಬ್ರರಿ ಪ್ರವರ್ತಕ ಸ್ವಸ್ತಿಕ್ ದೇವರಾಜ್ ಅವರಿಗೆ ಜಿನಧರ್ಮ ಪ್ರಭಾವಕ ಎಂಬ ಬಿರುದನ್ನಿತ್ತು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ನಿರಂಜನ್ ಜೈನ್ ಕುದ್ಯಾಡಿ ಕಾರ್ಯಕ್ರಮ ನಿರೂಪಿಸಿದರು.
ಮಹಾವೀರ್ ಪ್ರಸಾದ್ ಹೊರನಾಡು ಪ್ರಶಸ್ತಿ ಪತ್ರ ವಾಚಿಸಿದರು. ಮಿತ್ರಸೇನ್ ಜೈನ್ ಅಳದಂಗಡಿ ಶಾಂತಿಮಂತ್ರ ಪಠಿಸಿದರು.

By Suddi9 Author

Suddi9

Leave a Reply

Your email address will not be published. Required fields are marked *