ಮಂಗಾಜೆ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಮಂಗಾಜೆ ಕೊರ್ದಬ್ಬು ದೈವಸ್ಥಾವು ಪುನರ್ ನಿರ್ಮಾಣಗೊಳ್ಳಲಿರುವ ದೈವಸ್ಥಾನಕ್ಕೆ ಡಿ.7 ರಂದು ಸೋಮವಾರ ಪೊಳಲಿ ವೆಂಕಟೇಶ್ ತಂತ್ರಿಯವರಿಂದ ಭೂಮಿ ಪೂಜೆ ನೆರವೇರಿತು.
ದೈವಸ್ಥಾನಕ್ಕೆ ಸಂಭಂಧಪಟ್ಟ ಗುತ್ತಿನವರಾದ ಶ್ರೀಕರ ಶೆಟ್ಟಿ ಉಮಾ ಆಳ್ವ ಬಡಕಬೈಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕೇಶ್ ಚೌಟ, ಕೊರ್ಧಬ್ಬು ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ಕಾರ್ಯದರ್ಶಿ ದೇವ್ದಾಸ್ ಆಯೆರೆಮಾರ್,ಕೋಶಾಧಿಕಾರಿ ಶೇಖರ ಬಂಗೇರ ಗಾಣೆಮಾರ್,ಲಿಂಗಪ್ಪ ಗುರಿಕಾರ, ಶಶಿಧರ ಮಂಗಾಜೆ ಹಾಗೂ ಸೇವಾಸಮಿತಿ ಸರ್ವಸದಸ್ಯರು ಉಪಸ್ಥತರಿದ್ದರು.
* ಕೋರ್ದಬ್ಬು ದೈವಸ್ಥಾನಕ್ಕೆ ಶಿಲಾನ್ಯಾಸ*
ಪುನರ್ ನಿರ್ಮಾಣಗೊಳ್ಳಲಿರುವ ನೂತನ ದೈವಸ್ಥಾನಕ್ಕೆ ಡಿ. 10ರಂದು ಗುರುವಾರ ಬೆಳಗ್ಗೆ 7.25ಕ್ಕೆ ಶಿಲಾನ್ಯಾಸವು ನಡೆಯಲಿದೆ.


