ಪೊಳಲಿ: ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ “ಸಂಧ್ಯಾಭಜನಾ ಸೇವೆ”ಯಲ್ಲಿ ಅ.9ರಂದು ಶುಕ್ರವಾರ ನಡೆದ 45 ನೇ ದಿನದ ಸಂಧ್ಯಾಭಜನೆ ಸೇವೆಯಲ್ಲಿ “ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಮುಂಡಕೋಲು ಸುಳ್ಯ ಭಜನಾ ಸಂಕೀರ್ತನೆ ನಡೆಸಿಕೊಟ್ಟರು.

ಶ್ರೀ ಅಖಿಲೇಶ್ವರ ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಪ್ರಸಾದ ನೀಡಿದರು. ಈಸಂದರ್ಭದಲ್ಲಿ ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
