ಕೈಕಂಬ: ಯುವಶಕ್ತಿ ಕಾಜಿಲ’ ಇದರ ನೇತೃತ್ವದಲ್ಲಿ ಕಾಜಿಲ ಕೋರ್ದಬ್ಬು ದೈವಸ್ಥಾನ ವಠಾರದಲ್ಲಿ ಅ. 4ರಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಉಪಸ್ಥಿತಿಯಲ್ಲಿ ಗಂಜಿಮಠ ಗ್ರಾಪಂ ವ್ಯಾಪ್ತಿಯಲ್ಲಿ ಕೊರೋನಾ ವಾರಿಯರ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿದರು.
ಶಾಸಕರೊಂದಿಗೆ ಮಂಡಲ ಅಧ್ಯಕ್ಷ ತಿಲಕ್ರಾಜ್ ಕೃಷ್ಣಾಪುರ, ಮಂಡಳ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಗುರುಪುರ ಮಹಾಶಕ್ತಿ ಅಧ್ಯಕ್ಷ ಸೋಹನ್ ಅತಿಕಾರಿ, ಸಹರಾ ಶಾಲಾ ಪ್ರಾಂಶುಪಾಲ ಕೇಶವ, ಹರೀಶ್ ಮಟ್ಟಿ, ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ, ಗೀತಾ ಶೆಟ್ಟಿ, ಜಯಾನಂದ ನಾಯಕ್, ರಾಮ, ನೀಲಾಕ್ಷ, ಮಾರಪ್ಪ ಶೆಟ್ಟಿ, ಗಂಗಾಧರ, ದಯಾನಂದ, ಅಪ್ಪು, ಅಜಯ್, ಸುಂದರ ಮುಖಾರಿ, ಸಂಘದ ಸದಸ್ಯರು, ಗ್ರಾಮಸ್ಥರು ಇದ್ದರು.
