ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ಟಸ್ಟ್ ನಿಂದ ಬಂಟ್ವಾಳ ತಾ.ನ ಅರಳ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ ಮಂಜೂರಾದ ಅನದಾನ1 ಲಕ್ಷ ರೂ.ವಿನ ಚೆಕ್ ನ್ನು ವಿತರಿಸಲಾಯಿತು.
ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಈ ಚೆಕ್ ನ್ನು ಸಂಘದ ಅಧ್ಯಕ್ಷೆ ಸುನೀತಾ ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭ ದಲ್ಲಿ ಯೋಜನೆಯ ಬಂಟ್ವಾಳ ತಾ.ಘಟಕದ ಯೋಜನಾಧಿಕಾರಿ ಜಯಾನಂದ ಪಿ.,ವಲಯ ಮೇಲ್ವಿಚಾರಕ ಕೇಶವ,ಹಾಲು ಉ.ಮ.ಸ.ಸಂಘದ ಉಪಾಧ್ಯಕ್ಷೆ ರೂಪಾ ಶೆಟ್ಟಿ,ಕಾರ್ಯದರ್ಶಿ ಸುಧಾಮಣಿ,ನಿರ್ದೇಶಕರಾದ ವಿಜಯಲಕ್ಷ್ಮಿ,ರತ್ನಾ ನಾಯಕ್,ಭಾರತಿ,ಉಮಾವತಿ,ಕುಸುಮ, ರಾಜೀವಿ ಮತ್ತು ಹಾಲು ಪರಿವೀಕ್ಷಕಿ ಸೀತಾ ಮೊದಲಾದವರಿದ್ದರು
