ಬಂಟ್ವಾಳ: ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತ ರೈತರ ನಿಯೋಗ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರ ಭೇಟಿಯಾಗಿ ಡ್ಯಾಂ ನಿಂದ ಮುಳುಗಡೆಯಾದ ಭೂಮಿಗೆ ಪರಿಹಾರ ದೊರಕದಿರುವ ಕುರಿತು ಮನವಿ ಸಲ್ಲಿ ಗಮನಸೆಳೆಯಿತು.
ತುಂಬೆ ಡ್ಯಾಂ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಂತ್ರಸ್ತ ರೈತರು ನಗರಪಾಲಿಕೆ ಆಯುಕ್ತರನ್ನು ಭೇಟಿಯಾಗಿ ನ್ಯಾಯೋಚಿತ ಡ್ಯಾಂನಿಂದ ಮುಳುಗಡೆಯಾಗುವ ಪ್ರದೇಶದ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಲಿಖಿತ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಿಯೋಗದಲ್ಲಿ ಜಾನ್ ಲೋಬೋ, ಅಂಜಲಿ ಡಿಸೋಜ ,ಗ್ರೆಟ್ಟ ಡಿಸೋಜ, ವಾಸಿ ಡಿ’ಸೋಜ, ಗ್ಲಾಶನ್ ಡಿ’ಸೋಜ, ಪ್ರಜ್ವಲ್ ಡಿ’ಸೋಜ, ಜೀತಾ ಡಿ’ಸೋಜ, ಫೆಲಿಕ್ಸ್ ,ಸವಿತಾ ಡಿಸೋಜ, ಸೀತಾ ಮೇರಿ ಡಿಸೋಜ ,ಅನಿಶಾ, ನವೀನ, ಸಿಂತಿಯಾಮೇಲರಾಯ್ , ಸೀನಾ ಡಿ’ಸೋಜ ಮೊದಲಾದ ಸಂತ್ರಸ್ಥ ರೈತರು ಉಪಸ್ಥಿತರಿದ್ದರು
