ಗೋಳ್ತಮಜಲು : ಗೋಳ್ತಮಜಲು ಬಿಜೆಪಿ ಮಹಾಶಕ್ತಿಕೇಂದ್ರದ ಪ್ರಮುಖರ ಸಭೆಯು ಮಹಾಶಕ್ತಿಕೇಂದ್ರದ ಅಧ್ಯಕ್ಷ ರಮಾನಾಥ ರಾಯಿ ಅವರ ಅಧ್ಯಕ್ಷತೆಯಲ್ಲಿ ಬಾಳ್ತಿಲ ಗ್ರಾಮದ ಕುದ್ರೆಬೆಟ್ಟು ಮಣಿಕಂಠ ಭಜನಾ ಮಂದಿರದಲ್ಲಿ ನಡೆಯಿತು. ಪಕ್ಷದ ಸೇವಾ ಸಪ್ತಾಹ ಕಾರ್ಯಕ್ರಮ ಹಾಗೂ ಗ್ರಾಮ ಪಂಚಾಯತ್ ಚುನಾವಣಾ ಸಿದ್ದತೆಯ ಬಗ್ಗೆ ಕ್ಷೇತ್ರ ಮಟ್ಟದ ಪಂಚಾಯತ್ ಚುನಾವಣಾ ಸಹ ಪ್ರಮುಖರಾದ ಪ್ರಭಾಕರ ಪ್ರಭು ಹಾಗೂ ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿಯ ಪ್ರ. ಕಾರ್ಯದಶಿ೯ ಡೊಂಬಯ ಅರಳ ಅವರು ಮಾಹಿತಿ ನೀಡಿದರು.
ಗೋಳ್ತಮಜಲು ಮಹಾಶಕ್ತಿಕೇಂದ್ರದ ಪ್ರಭಾರಿಯಾಗಿರುವ ಜಿಲ್ಲಾ ಯುವ ಮೋಚಾ೯ದ ಪ್ರ. ಕಾರ್ಯದಶಿ೯ ಸುದಶ೯ನ್ ಬಜ,ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದಶಿ೯ ಯಶೋಧರ ಕಬೆ೯ಟ್ಟು, ಜಿಲ್ಲಾ ಹಿಂದುಳಿದ ವಗ೯ ಮೋಚಾ೯ದ ಪ್ರ. ಕಾರ್ಯದಶಿ೯ ಮೋನಪ್ಪ ದೇವಶ್ಯ, ಹಿ.ವರ್ಗ ಕ್ಷೇತ್ರ ಸಮಿತಿ ಅಧ್ಯಕ್ಷ ಆನಂದ ಶಂಭೂರು, ಜಿಲ್ಲಾಪಂಚಾಯತ್ ಸದಸ್ಯೆ ಕಮಾಲಾಕ್ಷಿ ಪೂಜಾರಿ, ಮಾಜಿ ಜಿಪಂ ಸದಸ್ಯ ಚೆನ್ನಪ್ಪಕೋಟ್ಯಾನ್, ಎಸ್. ಸಿ.ಮೋಚಾ೯ದ ಪ್ರ.ಕಾರ್ಯದಶಿ೯ ರಮೇಶ್ ಕುದ್ರೆಬೆಟ್ಟು ಪ್ರೇಮನಾಥ ಶೆಟ್ಟಿ,ಸುರೇಶ್ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.
