ಗುರುಪುರ:ಬಿಲ್ಲವ ಸಮಾಜ ಸೇವಾ ಸಂಘ(ರಿ) ಗುರುಪುರ ಇಲ್ಲಿ ಸೆ. 2ರಂದು ಬ್ರಹ್ಮಶ್ರೀ ನಾರಾಯಣ ಗುರು ಜನ್ಮದಿನದಂಗವಾಗಿ ವಿಶೇಷ ಪೂಜೆ ನಡೆಯಿತು. ಅರ್ಚಕ ಐತಪ್ಪ ಪೂಜಾರಿ ಪೂಜೆ ನಡೆಸಿಕೊಟ್ಟರು.
ಪೂಜಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಹಾಬಲ ಅಮೀನ್, ಉಪಾಧ್ಯಕ್ಷ ಭೋಜ ಸುವರ್ಣ ಪೊನ್ನೆಲ, ಕಾರ್ಯದರ್ಶಿ ದೀಪಕ್ ಬಂಗೇರ, ಗೌರವ ಸಲಹೆಗಾರರಾದ ದೇವದಾಸ ಅಂಚನ್ ಹಾಗೂ ಬಳ್ಳಿ ಚಂದ್ರಶೇಖರ, ಮಹಿಳಾ ಘಟಕದ ಅಧ್ಯಕ್ಷೆ ವಿನೋದಾ ಡಿ. ಅಂಚನ್, ಕೋಶಾಧಿಕಾರಿ ಶೀನ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಸುರೇಶ್ ಅಮೀನ್ ಚಿಲಿಂಬಿ, ತನಿಯಪ್ಪ ಪೂಜಾರಿ, ರಾಜೇಶ್ ಸುವರ್ಣ ಹಾಗೂ ಬಿಲ್ಲವ ಸಮಾಜ ಬಾಂಧವರು ಉಪಸ್ಥಿತರಿದ್ದರು.


