ಬಂಟ್ವಾಳ:   ದ.ಕ ಜಿಲ್ಲೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ,ಮೀನುಗಾರಿಕೆ ಮತ್ತು ಬಂದರು ಇಲಾಖೆಗಳಿಗೆ ಸಂಬಂಧಿಸಿ ಪ್ರಮುಖ ವಿಷಯಗಳ ಬಗ್ಗೆ ಬೆಂಗಳೂರಿನ ವಿಕಾಸಸೌಧದಲ್ಲಿ ಬುಧವಾರ ಸಭೆ ನಡೆಯಿತು.   ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.IMG-20200729-WA0028

ಮೂರು ಇಲಾಖೆಗೆ ಸಂಬಂಧಿಸಿದಂತೆ ಕೆಲವೊಂದು ಸಮಸ್ಯೆಗಳ ಬಗ್ಗೆ  ಚರ್ಚೆಸಿ ಪರಿಹಾರಕ್ಕೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಗಣಿ ಇಲಾಖೆಗೆ ಸಂಬಂಧಿಸಿ ಕೆಲ ಜ್ವಲಂತ ಸಮಸ್ಯೆಗಳನ್ನು ಬಗ್ಗೆ ಸಭೆಯಲ್ಲಿ  ಅಧಿಕಾರಿಗಳ ಹಾಗೂ ಸಚಿವರ  ಗಮನಸೆಳೆದರು.

ಜಿಲ್ಲೆಯ ಶಾಸಕರುಗಳಾದ ಎಸ್.ಅಂಗಾರ,ಸಂಜೀವ ಮಠಂದೂರು,ಹರೀಶ್ ಪೂಂಜ ಬೆಳ್ತಂಗಡಿ,ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್  ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ  ಹಿರಿಯ ಅಧಿಕಾರಿಗಳಾದ ಮಹೇಶ್ವರ ರಾವ್,ಡಾ.ಎನ್.ಶಿವಶಂಕರ್ ಮೊದಲಾದವರಿದ್ದರು

By suddi9

Leave a Reply

Your email address will not be published. Required fields are marked *