ಬಂಟ್ವಾಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು, ಶ್ರೀಕ್ಷೇತ್ರ ಧರ್ಮಸ್ಥಳ ಸೇವಾಸಮಿತಿ ಮಲ್ಲೂರು ವತಿಯಂದ ದೆಮ್ಮಲೆ ಅಂಗನವಾಡಿಯ ಬಳಿ ಗ್ರಾಮೀಣ ಪ್ರದೇಶದಲ್ಲಿ ಅದ್ಭುತ ಸಾಧನೆಗೈದ ಸಾಧಕರನ್ನು ಅಭಿನಂದನಾ ಸಮಾರಂಭ ನಡೆಯಿತು. ಹಾಗೆಯೇ ಶೈಕ್ಷಣಿಕ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ, ಕೊರೋನ ವಾರಿರ್ಯಾಸ್ ಆಗಿ ಸೇವೆಸಲ್ಲಿಸಿದವರಿಗೆ ಅಭಿನಂದನೆ ಮತ್ತು ಅಶಕ್ತ ಕುಟುಂಬಕ್ಕೆ ಆಶಾಕಿರಣ ಕಾರ್ಯಕ್ರಮದಡಿ ಆಹಾರಕಿಟ್ ವಿತರಿಸಲಾಯಿತು.

