ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ  ಕುಪ್ಪೆಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಗುಡ್ಡ, ಮನೆ ಆವರಣ ತಡೆ ಗೋಡೆ ಸಹಿತ  ಪರಂಬೋಕು ನೀರಾವರಿ ತೋಡುಗಳ  ಆವರಣ ಗೋಡೆಗಳು ಕುಸಿದ ಸ್ಥಳಗಳಿಗೆ  ಜಿಲ್ಲಾ ಪಂಚಾಯತ್ ಸದಸ್ಯ  ಜನಾರ್ಧನ ಗೌಡ ಮುಚ್ಚೂರು  ಅವರು ಜಿಲ್ಲಾ ಪಂಚಾಯತ್ ಇಂಜಿನಿಯರ್ ಹಾಗೂ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ  ಹಾನಿ ಬಗ್ಗೆ ಪರಿಶೀಲನೆ ನಡೆಸಿದರು.
20200708_164949ಈ ವೇಳೆ  ಬಿಜೆಪಿ ಕಿಲೆಂಜಾರು ಶಕ್ತಿ ಕೇಂದ್ರದ ಪ್ರಮುಖರಾದ ಜಗದೀಶ್ ಪಾಕಾಜೆ , ಬಿ.ಜೆ.ಪಿ ಮಂಡಲ ಕಾರ್ಯದರ್ಶಿ ಗಣೇಶ್ ಪಾಕಾಜೆ , ಮಂಡಲ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಅರುಣ ಭಾಸ್ಕರ್ ಶೆಟ್ಟಿ ಹಾಗೂ ಸ್ಥಳೀಯ ಬಿ.ಜೆ.ಪಿ ಮುಖಂಡರು, ಗ್ರಾಮಸ್ಥರು  ಇದ್ದರು.

By suddi9

Leave a Reply

Your email address will not be published. Required fields are marked *