ತಂಡದಿಂದ ಯುವಕನ ಕೊಲೆಗೆ ಯತ್ನ
ಬಂಟ್ವಾಳ : ಸ್ಕಾರ್ಫಿಯೋ ಕಾರಿನಲ್ಲಿ ಬಂದ ನಾಲ್ವರು ತಂಡವೊಂದು ಯುವಕನೋರ್ವನ ಕೊಲೆಗೆ ಯತ್ನಿಸಿದ ಘಟನೆ ಪುದು ಗ್ರಾಮದ ಮಾರಿಪಳ್ಳದಲ್ಲಿ ಸೋಮವಾರ ರಾತ್ರಿ ಘಟನೆ ನಡೆದಿದೆ.
ಮಾರಿಪಳ್ಳ ನಿವಾಸಿ ಮುಖೇಶ್ ಹಲ್ಲೆಗೊಳಗಾದ ಯುವಕ. ತಾನು ಅಂಗಡಿಗೆ ತೆರಳುತ್ತಿದ್ದ ವೇಳೆ ¸ಕಾರಿನಲ್ಲಿ ಬಂದ ಅಮಿತ್, ರಾಜೇಶ್, ಯತೀನ್ ಹಾಗೂ ಚೇತನ್ ಮರದ ಸೋಂಟೆಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಜತೆಗೆ ಸ್ಥಳಕ್ಕೆ ಬಂದ ಪುನೀತ್ ಹಾಗೂ ಕಿರಣ್ಗೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಮುಂದಿನ ತನಿಖೆ ನಡೆಯುತ್ತಿದೆ