ಬಂಟ್ವಾಳ :ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಓಫ್ ಇಂಡಿಯಾ ಸಂಸ್ಥಾಪನಾ ದಿನದ ಅಂಗವಾಗಿ ಕೊಳಕೆ ಎಸ್ ಡಿ ಪಿ ಐ ಘಟಕದ ವತಿಯಿಂದ ಕೊಳಕೆ ಸೆಂಟರ್ ನಲ್ಲಿ ದ್ವಜಾರೋಹಣ ಕಾರ್ಯಕ್ರಮ ನಡೆಯಿತು. ದ್ವಜಾರೋಹಣ ವನ್ನು ಎಸ್ ಡಿ ಪಿ ಐ ಕೊಳಕೆ ಅಧ್ಯಕ್ಷರಾದ ಬಾತಿಶ್ ಕೊಳಕೆ ಕಾರ್ಯದರ್ಶಿ ಗಳಾದ ರೌಫ್ ಕೊಳಕೆ ನೆರವೇರಿಸಿದರು.
ನಂತರ ಸಜೀಪ ಮೂಡ ಗ್ರಾಮದ 3ನೇ ವಾರ್ಡಿನ ಆಶಾ ಕಾರ್ಯಕರ್ತೆ ಯಾರಾದ ಕೊರೋನಾ ಸಂದರ್ಭದಲ್ಲಿ ವಾರ್ಡಿನಲ್ಲಿ ಮಳೆ ಗಾಳಿ ಬಿಸಿಲುನ್ನು ಲೆಕ್ಕಿಸದೆ ವಾರ್ಡಿನ ಪ್ರತಿ ಮನೆಗೆ ಭೇಟಿಕೊಟ್ಟು ರೋಗದ ಭೀತಿಯ ಬಗ್ಗೆ ಹಾಗೂ ಮುಂಜಾಗ್ರತೆ ಕ್ರಮವನ್ನು ಮಾಡಿದ ಶ್ರೀಮತಿ ಪುಷ್ಪಲತಾ ಹಾಗೂ ಶ್ರೀಮತಿ ಶಶಿಕಲಾ ರವರಿಗೆ ಎಸ್ ಡಿ ಪಿ ಐ ಕೊಳಕೆ ಘಟಕದ ವತಿಯಿಂದ ಸನ್ಮಾನಿಸಲಾಯಿತು. 
ಚೈನಾ ದಾಳಿಯಿಂದ 20 ವೀರ ಸೈನಿಕರ ಬಲಿದಾನವನ್ನು ಸ್ಮರಿಸುತ್ತಾ 1ನಿಮಿಷ ಮೌನ ಶ್ರದ್ದಾ0ಜಲಿ ಸಲ್ಲಿಸಿ ಮುಖ್ಯ ಅತಿಥಿಯಾಗಿ ಆಗಮಿಸಿದಎಸ್ ಡಿ ಪಿ ಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಫರಂಗಿಪೇಟೆ ಪ್ರಸಕ ಭಾರತ ಸರಾಕಾರದ ವೈಫಲ್ಯತೆ ಎಸ್ ಡಿ ಪಿ ಐ ಪಕ್ಷದ ಮುಂದಿನ ಯೋಜನೆ ಬಗ್ಗೆ ಮಾತಾಡಿದ್ದು .
ಈ ಸಂದರ್ಭದಲ್ಲಿ ಎಸ್ಡಿಪಿಐ ಕೊಳಕೆ ಅಧ್ಯಕ್ಷರಾದ ಬಾತಿಶ್ ಕೊಳಕೆ ಕಾರ್ಯದರ್ಶಿಗಳಾದ ರೌಫ್ ಕೊಳಕೆ ಸಜೀಪ ಮೂಡ ಮುನ್ನೂರು ಅಧ್ಯಕ್ಷರಾದ ಫಾರೂಕ್ ಅಲಾಡಿ ಕ್ಷೆತ್ರ ಸಮಿತಿ ಕಾರ್ಯದರ್ಶಿಗಳಾದ ಸಲೀಂ ಅಲಾಡಿ ಕ್ಷೇತ್ರ ಸಮಿತಿ ಸದಸ್ಯರಾದ ರೌಫ್ ಕಲಾಯಿ ಮುಹಿಯುದ್ದೀನ್ ಜುಮಾ ಮಸೀದಿ ಕೊಳಕೆ ಕೋಶಾಧಿಕಾರಿಗಳಾದ ಫಾರೂಕ್ ಕೊಳಕೆ ಉಪಾಧ್ಯಕ್ಷರಾದ ಸಿದ್ದೀಕ್ ಕೊಳಕೆ ಎಸ್ ವೈ ಎಸ್ ಕೊಳಕೆ ಅಧ್ಯಕ್ಷರಾದ ಹಮೀದ್ ಹಾಜಿ ಕಾರ್ಯದರ್ಶಿ ಗಳಾದ ಎಸ್ ಕೆ ಮೊಹಮ್ಮದ್ ಉಪಸ್ಥಿತರಿದ್ದರು ಎಸ್ ಡಿ ಟಿ ಯು ಜಿಲ್ಲಾಪ್ರಧಾನ ಕಾರ್ಯದರ್ಶಿಗಳಾದ ಮಾಲಿಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
