ಕುಪ್ಪೆಪದವು: ಇಲ್ಲಿನ ನೆಲ್ಲಿಜೋರ ಗುಡ್ಡಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ಆರಿಸಿತು. ಎಡಪದವು -ಕುಪ್ಪೆಪದವು ರಸ್ತೆಯ ಮಾಣಿಪಳ್ಳ ಬಳಿ ಇರುವ ಗುಡ್ಡದಲ್ಲಿ ಸಂಜೆ ಸುಮಾರು 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಪ್ಪೆಪದವು ಪಿಡಿಓ ಸವಿತಾ ಮಂದೋಳಿಕರ್ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದರು. ಈ ಗುಡ್ಡದ ಒಂದು ಬದಿಯಲ್ಲಿ ರಸ್ತೆ ಇದ್ದು, ಗುಡ್ಡದ ಎರಡು ಬದಿಯಲ್ಲಿ ಜನವಸತಿ ಪ್ರದೇಶವಿದೆ, ಗುಡ್ಡದ ಅಂಚಿನಲ್ಲಿರುವ ವಸತಿ ಪ್ರದೇಶಕ್ಕೆ ಬೆಂಕಿ ಹರಡಿದ್ದರೆ ಹಲವು ಮನೆಗಳಿಗೆ ಅಪಾಯ ಉಂಟಾಗುತ್ತಿತ್ತು. 

