ಕೈಕಂಬ : ಉಳಾಯಿಬೆಟ್ಟಿನ ಶ್ರೀ ಮಹಮ್ಮಾಯಿ ಸ್ಪೋಟ್ರ್ಸ್ ಕ್ಲಬ್(ರಿ), ಶ್ರೀ ವಿಶ್ವನಾಥ ಮಹಾಗಣಪತಿ ಭಜನಾ ಸೇವಾ ಸಮಿತಿ, ಹಿಂದೂ ಜಾಗರಣ ವೇದಿಕೆ, ಶಿವರಾತ್ರಿ ಬೆಟ್ಟು ಫ್ರೆಂಡ್ಸ್, ನಾಗಬ್ರಹ್ಮ ಸೇವಾ ಸಮಿತಿ(ಅರಂತೋಡಿ), ಕೋರ್ದಬ್ಬು ಸೇವಾ ಸಮಿತಿ(ಮೂಡುಜೆಪ್ಪು), ಲಯನ್ಸ್ ಕ್ಲಬ್(ಕಾವೂರು) ಹಾಗೂ ದಾನಿಗಳ ಸಹಕಾರದೊಂದಿಗೆ ಉಳಾಯಿಬೆಟ್ಟು ಗ್ರಾಮದ ಸುಮಾರು 286 ಬಡ ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು.
ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ಪಂಚಾಯತ್ ಉಪಾಧ್ಯಕ್ಷೆ ಸೌಮ್ಯ ಪಂಡಿತ್, ನಿರಂಜನ ಶೆಟ್ಟಿ ಸಾಲೆ, ವಾಸುದೇವ ಮೂಲ್ಯ ಅರಂತೋಡಿ, ಲಕ್ಷ್ಮಣ್ ಸಾಲೆ, ಪಂಚಾಯತ್ ಸದಸ್ಯರಾದ ಕಮಲಾಕ್ಷ ತಲ್ಲಿಮಾರ್, ವಿಶ್ವನಾಥ ಶೆಟ್ಟಿ ಉಳಾಯಿಬೆಟ್ಟುಗುತ್ತು, ಹರೀಶ್ ಭಟ್ ಸಾಲೆ, ಹರೀಶ್ ಶೆಟ್ಟಿ ನಡಿಗುತ್ತು, ಚಂದ್ರಶೇಖರ ತಲ್ಲಿಮಾರ್, ದೀಕ್ಷಿತ್ ಕುಲಾಲ್, ಜಯಾನಂದ ಮುಂಡಾಡಿ, ಜಗದೀಶ ಕಿನ್ನಿಬೆಟ್ಟು, ದಿವಾಕರ ತಲ್ಲಿಮಾರ್, ಪ್ರವೀಣ್ ತಲ್ಲಿಮಾರ್, ಪ್ರಸಾದ್ ಆಚಾರ್ಯ, ಶಿವಾನಂದ ಮುಂಡಾಡಿ, ಸುರೇಶ್ ಅರಂತೋಡಿ ಮತ್ತಿತರರು ಉಪಸ್ಥಿತರಿದ್ದರು.
