ಬಂಟ್ವಾಳ: ಇಲ್ಲಿಗೆ ಸಮೀಪದ ಅಮ್ಟೂರು ದೇವಮಾತ ಚರ್ಚ್ ನ ಬಾಗಿಲು ಮುರಿದು  ಒಳ ಪ್ರವೇಶಿದ ಕಳ್ಳರು  ಹುಂಡಿಯಲ್ಲಿದ್ದ ಹಣ ಕಳವು ಗೈದು ಪರಾರಿಯಾದ ಘಟನೆ ನಡೆದಿದೆ.ಚಚ್೯ ನ ಎಡ ಬದಿಯ ಬಾಗಿಲನ್ನು ಮುರಿದು ಕಳ್ಳರು ಒಳಪ್ರವೇಶಿಸಿ  ಒಳಗಡೆ ಮತ್ತು  ಹಾಲ್  ಒಳಗೆ ಇದ್ದಂತಹ ಒಟ್ಟು ನಾಲ್ಕು ಹುಂಡಿಗಳನ್ನು ಒಡೆದು ಅದರೊಳಗೆ ಇದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.19-49-03-WhatsApp-Image-2020-04-08-at-5.53.18-PM

ಚರ್ಚ್ ನ ಧರ್ಮಗುರು ಡಾ. ಮಾರ್ಕ್ ಕ್ರಾಸ್ಟಲಿನೊ ಅವರು ನೀಡಿದ ಮಾಹಿತಿಯನ್ವಯ ಬಂಟ್ವಾಳ ನಗರ ಠಾಣೆಯ  ಅಪರಾಧ ವಿಭಾಗದ ಎಸ್ ಐ ಸಂರೋಷ್ ಬಿ.ಪಿ.ಮತ್ತವರ ಸಿಬ್ಬಂದಿಗಳು  ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು,ಮುಂದಿನ ತನಿಖೆ ನಡೆಸುತ್ತಿದ್ದಾರೆ.

 

By suddi9

Leave a Reply

Your email address will not be published. Required fields are marked *