ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಯವಕರ ತಂಡವೊಂದು  “ಆಸರೆ ಸೇವಾ ಫೌಂಡೇಶನ್ “  ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಇದೀಗ ದೇಶದಲ್ಲೇ   ಕೊರೋನ (ಕೋವಿಡ್- 19) ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ನಡೆಯುತ್ತಿರುವ ಲಾಕ್ ಡೌನ್ ಅವಧಿಯಲ್ಲಿ ಸೇವಾ ಭಾವನೆಯಿಂದ  ಆಸರೆ ಸೇವಾ ಫೌಂಡೇಶನ್  ಇದರ ಸದಸ್ಯರು  ಕರಿಯಂಗಳ ಗ್ರಾಮ ಪಂಚಾಯತ್ ವ್ಯಾಪ್ತಿಯ ತೀರ ಬಡತನದಲ್ಲಿರುವ 150 ಕುಟುಂಬಗಳಿಗೆ ದಿನನಿತ್ಯ ಬಳಕೆಯಾಗುವ ಸಾಮಾಗ್ರಿಗಳನ್ನು  ವಿತರಿಸಿದರು.745b91d6-cd4e-4312-a55e-6b7ee349863c

 ಬಡವರು ತಾನು ತೆಗೆದುಕೊಂಡ ಸಾಮಾಗ್ರಿಯಿಂದ ಮುಜುಗರಕ್ಕೊಳಗಾಗ ಬಾರದೆಂಬ ಉದ್ದೇಶ ದಿಂದ ಛಾಯಾಗ್ರಾಹಣ ವನ್ನು ನಿಷೇಧಿಸಿಲಾಗಿತ್ತು. ಈಸಂಧರ್ಭದಲ್ಲಿ   “ಆಸರೆ ಸೇವಾ ಫೌಂಡೇಶನ್ ”  ಇದರ ಅಧ್ಯಕ್ಷ ಚಂದ್ರಹಾಶ ಪಲ್ಲಿಪಾಡಿ , ಬಸೀರ್ ಗಾಣೆಮಾರ್, ವೀಣಾ ಆಚಾರ್ಯ , ಲಕ್ಷ್ಮೀಶ್ ಶೆಟ್ಟಿ,ರೋಶನ್ ಪುಂಚಮೆ,ರಾಜು ಕೋಟ್ಯಾನ್, ಮುಸ್ತಾಫ, ುಮೇಶ್ ಆಚಾರ್ಯ, ಜಗದೀಶ್ ಕರಿಯಂಗಳ, ಮಜೀದ್, ಪ್ರಶಾಂತ್  ಪದವು, ಅಜಯ್ , ವಾಮನ, ವಿಜಯ್, ಅಬ್ಬಾಸ್ ಗುಂಡಿಕುಮೇರ್, ಲತೀಫ್ ಕಲ್ಕುಟ,ನವಾಝ್ ಬಡಕಬೈಲ್ ಪ್ರೇಮ್ ನಾಥ್ ಚೇರಾ ಇದ್ದರು.

By suddi9

Leave a Reply

Your email address will not be published. Required fields are marked *