ಬಂಟ್ವಾಳ: ಕೊರೋನ ವೈರಸ್ ಹರಡುವಿಕೆ ತಡೆಗಟ್ಟುವ ಉದ್ದೇಶದಿಂದ ಜನತಾ ಕರ್ಫ್ಯೂವಿನಿಂದಾಗಿ ತತ್ತರಿಸಿರುವ ಫರಂಗಿಪೇಟೆ ಮತ್ತು ಮೇರಮಜಲು ಪರಿಸರದ ಬಡ ಕುಟುಂಬಗಳಿಗೆ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಜೀವನಾಶ್ಯಕ ವಸ್ತುಗಳನ್ನು ವಿತರಿಸಲಾಯಿತು. ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಅವರ ನಿರ್ದೇಶನದಂತೆ ಬಡ ಕುಟುಂಬವನ್ನು ಗುರುತಿಸಿ ಜೀವನಾಶ್ಯಕ ವಸ್ತು ವಿತರಿಸಲಾಯಿತು.

ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಜಯರಾಜ್ ಕರ್ಕೇರ ಮಂಟಮೆˌ ಪ್ರಮುಖರಾದ ಎಫ್. ಗಣೇಶ ಫರಂಗಿಪೇಟೆˌ ಮನೋಹರ ನಾಯ್ಕ್ ಅರ್ಕುಳˌ ಶ್ರೀಮತಿ ವೃಂದಾ ಮೇರಮಜಲುˌ ಬಿ ನಾರಾಯಣ ಬೆಳ್ಚಾಡ ಮೇರಮಜಲುˌ ರಘುನಾಥ ಪೂಜಾರಿ ತುಪ್ಪೆಕಲ್ಲು ˌ ಸುಕೇಶ್ ಶೆಟ್ಟಿ ತೇವು ˌ ವಿಕ್ರಮ್ ಬರ್ಕೆ ˌ ಸುಕುಮಾರ್ ಸಿಟಿ ಮೆಡಿಕಲ್ಸ್ ಫರಂಗಿಪೇಟೆ ˌ ಸಹಕರಿಸಿದರು