ಕೈಕಂಬ: ಮಂಗಾಜೆ ಶ್ರೀ ಕೋರ್ಧಬ್ಬು ದೈವಸ್ಥಾನದ ಬಾಲಾಲಯ ಪ್ರತಿಷ್ಠೆ ಹಾಗೂ ವಿಜ್ಙಾಪನಾ ಪತ್ರಬಿಡುಗಡೆ ಕಾರ್ಯಕ್ರಮವು ಬುಧವಾರ ಮಂಗಾಜೆ ಕೊರ್ದಬ್ಬು ದೈವಸ್ಥಾನದ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಕೇಶ್ ಚೌಟ ವಹಿಸಿದ್ದರು.ಬಿಸಿರೋಡು ಗಣದಪಡ್ಪು ಬೃಹ್ಮಶ್ರೀ ನಾರಾಯಣ ಗುರು ಮಂದಿರ ಬಿಲ್ಲವಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ ವಿಜ್ಞಾಪಾನಪತ್ರ ಬಿಡುಗಡೆಗೊಳಿಸಿದರು.
ಶ್ರೀಕರ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ ಸೂಡ, ಉಧ್ಯಮಿಗಳಾದ ಉಮೇಶ್ಸಾಲಿಯಾನ್ ಬೆಂಜನಪದವು, ಜನಾರ್ಧನ ಶೆಟ್ಟಿ ಕನ್ಯಬೆಟ್ಟು, ಎಡಪದವು ಶ್ರೀ ರಾಮ ಭಜನಾಮಂದಿರದ ಅಧ್ಯಕ್ಷ ಮುರಳೀಧರ ಶೆಟ್ಟಿ ,ಬೆಂಜನಪದವು ಸ್ವಾಮಿ ಕೊರಗ ತನಿಯ ಕ್ಷೇತ್ರದ ವಿಜಯ , ಕೋರ್ದಬ್ಬು ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ,ಕಾರ್ಯದರ್ಶಿ ಶೇಖರ ಬಂಗೇರಾ, ಲಿಂಗಪ್ಪ ಮುಖಾರಿ, ಜನಾರ್ಧನ ಅಮ್ಮುಂಜೆ ಸ್ವಾಗತಿಸಿ ನಿರೂಪಿಸಿದರು , ದೇವ್ದಾಸ್ ಆಯೆರೆಮಾರ್ ಪ್ರಾಸ್ತಾವಿಸಿ ವಂದಿಸಿದರು.






