ಬಂಟ್ವಾಳ: ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿ ಕಾರಿಗಳ ಕ್ಷೇಮಭಿವೃದ್ಧಿ ಸಂಘ ದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ನೌಕರರಿ ಗೆ ಸ್ಪರ್ದಾತ್ಮಕ ಪರೀಕ್ಷೆಗಳ ತಯಾ ರಿಯ ಬಗ್ಗೆ ಮಾಹಿತಿ ಕಾರ್ಯಗಾರವು ಬಂಟ್ವಾಳ ತಾಲೂಕು ಸಾಮಾರ್ಥ್ಯ ಸೌ ದದಲ್ಲಿ ನಡೆಯಿತು.
ಮಾಹಿತಿ ಕಾರ್ಯಗಾರವನ್ನು ಕರ್ನಾಟಕ ಸಂಘ ದ.ಕ ಜಿಲ್ಲಾ ಅದ್ಯಕ್ಷರಾದ ನಾಗೇಶ್ ಎಂ ಇವರು ಉದ್ಘಾಟಿಸಿ ಮಾತನಾಡಿ ಸ್ಪರ್ಧತ್ಮಾಕ ಪರೀಕ್ಷೆಗಳನ್ನು ಎದುರಿಸಲು ಇರುವ ನಕರಾತ್ಮಕ ಯೋಚನೆಗಳನ್ನು ಕೈಬಿಟ್ಟು ಸಕರತ್ಮಾಕ ಅಂಶಗಳನ್ನು ಮೈಗೂಡಿಸಿಕೊಂಡು ಮುಂದಡಿ ಇಡಬೇಕಾಗಿ ಕಿವಿ ಮಾತು ಹೇಳಿದರು. ಮಾಹಿತಿ ಕಾರ್ಯಗಾರವನ್ನು ಬಂಟ್ವಾಳಾ ತಾಲೂಕು ಇರ್ವತ್ತೂರು ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್, ಬಾಳೆಪುಣಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್ ಹಾಗೂ ನಾವೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಚನ್ ಕುಮಾರ್ ನಡೆಸಿಕೊಟ್ಟರು.
