ಬಂಟ್ವಾಳ: ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಗ್ಯಾರೇಜು ಮಾಲಕರ ಸಂಘ ಬಂಟ್ವಾಳ ವಲಯವು ರಕ್ತದ ಕಾಯಿಲೆಯಿಂದ ಬಳಲುತ್ತಿರುವ ಬೆಂಜನಪದವಿನ ಶಾಲಾ ಬಾಲಕ ನಿಧೀಶ್ ನ ವೈದ್ಯಕೀಯ ವೆಚ್ಚಕ್ಕಾಗಿ ಗ್ಯಾರೇಜು ಮಾಲಕರು ಸಂಗ್ರಹಿಸಿದ ಸಹಾಯ ಧನವನ್ನು ಸಂಘದ ಮಾಸಿಕ ಸಭೆಯಲ್ಲಿ ಹಸ್ತಾಂತರಿಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಅಣ್ಣು ಪೂಜಾರಿ, ಕಾರ್ಯದರ್ಶಿ ಸುರೇಶ ಕುಲಾಲ್ , ಕೋಶಾಧಿಕಾರಿ ರಾಜೇಶ್ ಕುಲಾಲ್, ನಿಕಟಪೂರ್ವ ಅಧ್ಯಕ್ಷರಾದ ಬಿ ವಿಶ್ವನಾಥ್ , ಸಂಘದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ನವೀನ್ ಕುಲಾಲ್, ಜಗದೀಶ್ ರೈ, ಪ್ರಶಾಂತ್ ಭಂಡಾರ್ಕಾರ್ , ನಾರಾಯಣ್ ಪೂಜಾರಿ , ಗಣೇಶ್ ಆಚಾರ್ , ರಾಜೇಶ್ ಸಾಲ್ಯಾನ್ , ಪ್ರಸಾದ್ ಬಂಗೇರ, ಸುಧೀರ್ ಬೈಪಾಸ್ , ಭಾಸ್ಕರ್ ಕುಲಾಲ್ , ರಾಜೇಂದ್ರ ಮಾಣಿ , ಸುಧಾಕರ್ ಸಾಲ್ಯಾನ್ ಹಾಗು ಸಂಘದ ಸದಸ್ಯರು ಉಪಸ್ಥಿತರಿದ್ದರು.