ನೋಡುವಿಕೆ, ಆಲಿಸುವಿಕೆ, ಚಿಂತಿಸುವಿಕೆ ಮತ್ತು ಜೀವನದಲ್ಲಿ ಅಳವಡಿಸುವಿಕೆಯಿದ್ದಾಗ ಸಾಹಿತ್ಯವೇ ಜೇವನ ವಾಗುವುದು. ಇಂದಿನ ಯುವ ಜನತೆಗೆ ಸಾಹಿತ್ಯವೇ ಔಷದ. ಆದ್ದರಿಂದ ಯುವಜನರು ಹೆಚ್ಚು ಹೆಚ್ಚು ಸಾಹಿತ್ಯದ ಕಡೆಗೆ ಮುಂದಡಿಯಿಡಬೇಕು’ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ. ಶ್ರೀಶ ಕುಮಾರ್ ಹೇಳಿದರು.

WhatsApp Image 2020-02-24 at 2.26.28 PM (1) (1)ಅವರು ಕನ್ನಡ ಸಂಘ ವಿಟ್ಲ ಇದರ ವತಿಯಿಂದ ವಿಟ್ಲದ ವಿಠಲ ವಿದ್ಯಾ ಸಂಘದ ಸುವರ್ಣ ರಂಗ ಮಂದಿರದಲ್ಲಿ ನಡೆಸಲಾದ “ಸಾಹಿತ್ಯ ಮತ್ತಯ ಜೀವನ’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದರು. ಸಂಘದ ಅಧ್ಯಕ್ಷ ಬದನಾಜೆ ಶಂಕರನಾರಾಯಣ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಹರಿ ಪಾದೆಕಲ್ಲು ಸ್ವಾಗತಿಸಿದರು. ಜತೆಕಾರ್ಯದರ್ಶಿ ರಾಜಶೇಖರ್ ವಂದಿಸಿದರು. ಸೀತಾಲಕ್ಷ್ಮಿ ವರ್ಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *