ಬಂಟ್ವಾಳ: ಮಂಗಳೂರಿನಲ್ಲಿ ಸೋಮವಾರ ನಡೆದ ಪೌರತ್ವ ಕಾಯ್ದೆ ಸಮರ್ಥನಾ ಸಮಾವೇಶವನ್ನು ಬೆಂಬಲಿಸಿ ಬಿ.ಸಿ.ರೋಡು,ಬಂಟ್ವಾಳ,ಸಿದ್ದಕಟ್ಟೆ, ಮೊದಲಾದೆಡೆ ಅಘೋಷಿತ ಬಂದ್ ವ್ಯಕ್ತವಾಯಿತು.
ಮಧ್ಯಾಹ್ನದ ಬಳಿಕ ಅಂಗಡಿ,ಮುಂಗಟ್ಟುಗಳು ಸ್ವಯಂಪ್ರೇರೀತವಾಗಿ ಮುಚ್ಚಿ ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಿ, ಸಮಾವೇಶಲ್ಲಿ ಭಾಗವಹಿಸಲು ತೆರಳಿದರು.ಖಾಸಗಿ ಬಸ್,ಇತರ ವಾಹನಗಳ ಸಂಚಾರವು ವಿರಳವಾಗಿದ್ದರಿಂದ ಸದಾವಗಿಜಿಗುಡುತ್ತಿದ್ದ ಬಿ.ಸಿ.ರೋಡ್,ಬಂಟ್ವಾಳ ಮೊದಲಾದ ನಗರ ಪ್ರದೇಶಗಳು ಬಿಕೋ ಅನಿಸಿದವು,ಜನಸಂಚಾರ ಕೂಡ ಕಡಿಮೆಯಾಗಿತ್ತು.

