ಬಂಟ್ವಾಳ : ಪ್ರಕೃತಿಯ ಸತ್ಯವನ್ನು ಅರ್ಥ ಮಾಡಿಕೊಳ್ಳದಿದ್ದರೆ ದುರಂತಕ್ಕೆ ನಾಂದಿ,ನದಿ ಮೂಲ ನಾಶವಾದರೆ ಯಾವ ತಂತ್ರ ಜ್ಞಾನದಿಂದಲೂ ಮರು ಸ್ಥಾಪಿಸಲು ಸಾಧ್ಯವಿಲ್ಲ ಎಂದು ಸಹ್ಯಾದ್ರಿ ಸಂಚಾಯದ ಸಂಚಾಲಕ ಸಾಹಿತಿ ದಿನೇಶ್ ಹೊಳ್ಳ ಹೇಳಿದರು.
ಪುಂಜಾಲಕಟ್ಟೆ ಸ.ಪ್ರ.ದ ಕಾಲೇಜಿನ ಕನ್ನಡ ಸಂಘ ಹಾಗೂ ಐ.ಕ್ಯೂ.ಎ.ಸಿ.ಯ ವತಿಯಿಂದ ನಡೆದ ಸಾಹಿತ್ಯ ಮತ್ತು ನಿಸರ್ಗ ರೊಂದಿಗೆ ಮಾನವ ಸಂಬಂಧದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಕೃತಿ ಎಂದರೆ ತಾಯಿ.ಪ್ರಕೃತಿಯ ಉಳಿಯಲು ವೃಕ್ಷ ಬಂಧನ ಮಾಡಬೇಕು. ಸಾಹಿತ್ಯದೂಂದಿಗೆ ಮಾನವ ಸಂಬಂಧ ಹಾಸುಹೊಕ್ಕಾಗಿರುವಂಥದ್ದು ಎಂದರು . ಕನ್ನಡ ಸಂಘದ ಸಂಚಾಲಕ ಡಾ.ಕೃಷ್ಣಾನಂದ ಪಿ.ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು.ಐ.ಕ್ಯೂ.ಎ.ಸಿ ಸಂಯೋಜಕರು ಪ್ರೊ.ರವಿಶಂಕರ್ ಅಧ್ಯಕ್ಷತೆ ವಹಿಸಿದ್ದರು.ಚಿತ್ರ ಸ್ವಾಗತಿಸಿದರು.ರಂಜಿತ ಪ್ರಾರ್ಥಿಸಿ,ಯಶಸ್ವಿನಿ ನಿರೂಪಿಸಿ,ಕನ್ನಡ ಸಂಘದ ಕಾರ್ಯದರ್ಶಿ ಶ್ರಾವ್ಯಾಜೈನ್ ವಂದಿಸಿದರು.ಉಪನ್ಯಾಸ ಕರಾದ ಜನಾರ್ದನ,ಸುಜೀತ್,ಸುಪ್ರೀತ ರಕ್ಷತ ಉಪಸ್ಥಿತರಿದ್ದರು.
