ಎಕ್ಕಾರು :ರಾಜ್ಯಹೆದ್ದಾರಿ -67 ರ ಹುಣ್ಸೆಕಟ್ಟೆ – ಎಕ್ಕಾರು – ಕಟೀಲು ಪರಿಸರದಲ್ಲಿ ರಸ್ತೆ ಆಗಲೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ (ಜ.4)ಇಂದು ಮತ್ತು (ಜ.6)ಸೋಮವಾರ ಹುಣ್ಸೆಕಟ್ಟೆಯಿಂದ ಕಟೀಲು ವರೆಗಿನ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಬಜಪೆ ಕಡೆಯಿಂದ ಬರುವಂತಹ ಎಲ್ಲಾ ವಾಹನಗಳು ಹುಣ್ಸೆಕಟ್ಟೆಯ ಶಿಬರೂರು ದ್ವಾರ ದ ಮೂಲಕ ಸಾಗಿ ಬಲವಿನ ಗುಡ್ಡೆ – ಬಟ್ಟಕೋಡಿ ಮೂಲಕ ಕಿನ್ನಿಗೋಳಿಗೆ ಸಾಗಿ ಮೂರುಕಾವೇರಿ ಮೂಲಕ ಕಟೀಲಿಗೆ ಸಾಗಲು ಈ ಮೂಲಕ ಸೂಚಿಸಲಾಗಿದೆ.ಭಾನುವಾರದಂದು ಹುಣ್ಸೆಕಟ್ಟೆಯಿಂದ – ಕಟೀಲು ತನಕದ ರಸ್ತೆಯು ಎಲ್ಲಾ ವಾಹನ ಗಳ ಸಂಚಾರಕ್ಕೆ ಮುಕ್ತವಾಗಿರುತ್ತದೆ ಎಂದು ಮೂಲ್ಕಿ – ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
