ಸ್ಪರ್ದಾತ್ಮಕಯುಗದಲ್ಲಿಜೀವನೋಪಾಯಕ್
ವಾರಕ್ಕೆಎರಡು ಬಾರಿ ಮಂಗಳೂರು ಮಾರುಕಟ್ಟೆಯಿಂದ ಸುಮಾರು ಮೂರು ಸಾವಿರರೂಪಾಯಿದರದ ಉತ್ಪನ್ನಗಳನ್ನು ತಂದು ಮಾರಾಟ ಮಾಡುವುದರ ಮೂಲಕ ಜೀವನಕ್ಕಾಗುವಷ್ಟು ಸಂಪಾದನೆ ಮಾಡುತ್ತೇನೆ. ಮಾರುಕಟ್ಟೆಯಿಂದ ಉತ್ಪನ್ನಗಳನ್ನು ಸಾಗಿಸುವ ವೇಳೆ ಕೆಲವೊಮ್ಮೆ ತೊಂದರೆಗಳು ಎದುರಾಗುತ್ತವೆ, ಆದರೆ ತೊಂದರೆಗಳಿಗೆ ತಲೆಕೆಡಿಸಿಕೊಂಡು ಕೂತರೆ ನಮ್ಮಜೀವನ ನಡೆಯದು, ಏನೇ ತೊಂದರೆಗಳು ಎದುರಾದರೂಅದನ್ನುಎದುರಿಸುವಛಲ ನಮ್ಮಲ್ಲಿರಬೇಕುಎಂದುತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಲಲಿತಮ್ಮ.
ಖರ್ಚುವಚ್ಚವನ್ನೆಲ್ಲ ಬದಿಗಿಟ್ಟು ಲೆಕ್ಕ ಹಾಕುವುದಾದರೆ ದಿನಕ್ಕೆ ಎಂಟುನೂರು ರೂಪಾಯಿಗಳ ಸಂಪಾದನೆಜೊತೆಗೆಇನ್ನೂರು ರೂಪಾಯಿಗಳಷ್ಟು ಲಾಭವಿದೆ. ನನ್ನ ಈ ವೃತ್ತಿಗೆಕುಟುಂಬದವರೆಲ್ಲರ ಪ್ರೋತ್ಸಾಹವಿದೆ, ಮತ್ತುಇದುನನ್ನಜೀವನಕ್ಕೆ ನೆಮ್ಮದಿ, ಸಂತೊಷವನ್ನುತಂದುಕೊಟ್ಟಿದೆ. ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗಡೆಯವರ ಬೆಂಬಲ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ನಮ್ಮೆಲ್ಲಾ ಕೆಲಸಗಳಲ್ಲಿ ಬೆನ್ನೆಲುಬಾಗಿ ನಿಂತಿದೆ ಎಂದುತಮ್ಮಖುಷಿಯನ್ನುನಮ್ಮೊಂದಿಗೆ ಹಂಚಿಕೊಂಡರು.
ವರದಿ: ಪಲ್ಲವಿ ಕೋಂಬ್ರಾಜೆ
ಚಿತ್ರಗಳು: ಅಭಿರಾಮ ಶರ್ಮ
